ನವದೆಹಲಿ: ಗಾಜಾದಲ್ಲಿ ಮುಗ್ಧ ಮಕ್ಕಳು ಸಾವಿಗೀಡಾಗುತ್ತಿದ್ದು, ಈ ನಿಟ್ಟಿನಲ್ಲಿ ಯುದ್ಧ ಕೊನೆಗಾಣಿಸಲು ವಿಶ್ವ ನಾಯಕರು ಮುಂದಾಗಬೇಕು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ.
ಇದನ್ನು ಸ್ವಾಗತಿಸಿರುವ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಪಾಕಿಸ್ತಾನದಲ್ಲಿರುವ ಹಿಂದುಗಳ ಬಗ್ಗೆಯೂ ಧ್ವನಿಯೆತ್ತುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು ಇರ್ಫಾನ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಕನೇರಿಯಾ ನಿಮಗೆ ಮಕ್ಕಳ ನೋವು ಅರ್ಥವಾಗುತ್ತದೆ ಎಂಬುದರಲ್ಲಿ ನನಗೆ ಖುಷಿಯಿದೆ. ನಿಮ್ಮ ನಿಲುವಿನ ಪರ ನಾನು ನಿಲ್ಲುತ್ತೇನೆ. ಆದರೆ ದಯವಿಟ್ಟು ಪಾಕಿಸ್ತಾನದ ಹಿಂದೂಗಳ ಪರವಾಗಿಯೂ ಮಾತನಾಡಿ, ಇಲ್ಲಿಯೂ ಪರಿಸ್ಥಿತಿಯೇನು ಭಿನ್ನವಾಗಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಇರ್ಫಾನ್ ಖಂಡಿತವಾಗಿಯೂ ಸಹೋದರ ಈ ವಿಷಯದಲ್ಲಿ ನೀವು ನನ್ನೊಂದಿಗೆ ನಿಂತಿರುವುದಕ್ಕೆ ಸಂತೋಷವಿದೆ., ಜಗತ್ತಿನ ಎಲ್ಲ ದುಷ್ಕೃತ್ಯಗಳ ಬಗ್ಗೆ ಮಾತನಾಡೋಣ. ಯಾವ ನಂಬಿಕೆಯಾದರೂ ಸರಿ ತಪ್ಪು ಕೃತ್ಯಗಳನ್ನು ನಿರ್ಮೂಲನೆ ಮಾಡಬಹುದು ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
Irfan bhai, I’m happy that you understand the pain of children, and I stand with you on that. But please do speak about Pakistani Hindus as well. The situation is not very different here in Pakistan. https://t.co/lr8Rth5s90
— Danish Kaneria (@DanishKaneria61) November 3, 2023