News Karnataka Kannada
Saturday, May 04 2024
ದೆಹಲಿ

ಪಾಕಿಸ್ತಾನದ ಹಿಂದೂಗಳ ದುಸ್ಥಿತಿ ಬಗ್ಗೆಯೂ ಮಾತನಾಡಿ: ಇರ್ಫಾನ್‌ ಗೆ ಕನೇರಿಯಾ ಮನವಿ

Kaneria urges Irfan to talk about plight of Hindus in Pakistan
Photo Credit : Twitter

ನವದೆಹಲಿ: ಗಾಜಾದಲ್ಲಿ ಮುಗ್ಧ ಮಕ್ಕಳು ಸಾವಿಗೀಡಾಗುತ್ತಿದ್ದು, ಈ ನಿಟ್ಟಿನಲ್ಲಿ ಯುದ್ಧ ಕೊನೆಗಾಣಿಸಲು ವಿಶ್ವ ನಾಯಕರು ಮುಂದಾಗಬೇಕು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಹೇಳಿದ್ದಾರೆ.

ಇದನ್ನು ಸ್ವಾಗತಿಸಿರುವ ಪಾಕಿಸ್ತಾನದ ಮಾಜಿ ಸ್ಪಿನ್ನರ್‌ ದಾನಿಶ್‌ ಕನೇರಿಯಾ ಪಾಕಿಸ್ತಾನದಲ್ಲಿರುವ ಹಿಂದುಗಳ ಬಗ್ಗೆಯೂ ಧ್ವನಿಯೆತ್ತುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಎಕ್ಸ್‌ ಮಾಡಿರುವ ಅವರು ಇರ್ಫಾನ್‌ ಪೋಸ್ಟ್‌ ಗೆ ಪ್ರತಿಕ್ರಿಯೆ ನೀಡಿದ್ದು, ಕನೇರಿಯಾ ನಿಮಗೆ ಮಕ್ಕಳ ನೋವು ಅರ್ಥವಾಗುತ್ತದೆ ಎಂಬುದರಲ್ಲಿ ನನಗೆ ಖುಷಿಯಿದೆ. ನಿಮ್ಮ ನಿಲುವಿನ ಪರ ನಾನು ನಿಲ್ಲುತ್ತೇನೆ. ಆದರೆ ದಯವಿಟ್ಟು ಪಾಕಿಸ್ತಾನದ ಹಿಂದೂಗಳ ಪರವಾಗಿಯೂ ಮಾತನಾಡಿ, ಇಲ್ಲಿಯೂ ಪರಿಸ್ಥಿತಿಯೇನು ಭಿನ್ನವಾಗಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಇರ್ಫಾನ್‌ ಖಂಡಿತವಾಗಿಯೂ ಸಹೋದರ ಈ ವಿಷಯದಲ್ಲಿ ನೀವು ನನ್ನೊಂದಿಗೆ ನಿಂತಿರುವುದಕ್ಕೆ ಸಂತೋಷವಿದೆ., ಜಗತ್ತಿನ ಎಲ್ಲ ದುಷ್ಕೃತ್ಯಗಳ ಬಗ್ಗೆ ಮಾತನಾಡೋಣ. ಯಾವ ನಂಬಿಕೆಯಾದರೂ ಸರಿ ತಪ್ಪು ಕೃತ್ಯಗಳನ್ನು ನಿರ್ಮೂಲನೆ ಮಾಡಬಹುದು ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು