ನವದೆಹಲಿ: ಕಾಂಗ್ರೆಸ್ ನಾಯಕ ಕಮಲ್ ನಾಥ್ ಬಿಜೆಪಿ ಸೇರುವ ಬಗ್ಗೆ ವದಂತಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಈ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.
ಶನಿವಾರ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಮಲ್ ನಾಥ್, ಪಕ್ಷ ತೊರೆಯುವ ಪ್ರಶ್ನೆಗೆ ಉತ್ತರಿಸದೆ, ಅದರ ಕುರಿತು ನಾನು ಮೊದಲು ನಿಮಗೇ(ಮಾಧ್ಯಮದವರಿಗೆ) ಹೇಳುತ್ತೇನೆ ಎಂದರು.
ಕಮಲ್ನಾಥ್ ಪುತ್ರ ನಕುಲ್ ನಾಥ್ ತಮ್ಮ ಎಕ್ಸ್ ಖಾತೆಯ ಬಯೋದಿಂದ ಕಾಂಗ್ರೆಸ್ ಎಂದು ಬರೆದಿದ್ದುದನ್ನು ತೆಗೆದುಹಾಕಿದ್ದು ವದಂತಿಗಳಿಗೆ ಬಲ ತುಂಬಿದೆ. ಮಧ್ಯಪ್ರದೇಶದ ಚಿಂದ್ವಾರದ ಸಂಸದರಾಗಿರುವ ಅವರು ಸಂಸತ್ತಿನ ಕೆಳಮನೆಯಲ್ಲಿ ಒಂಭತ್ತು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದರು.
ಕಮಲ್ ನಾಥ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಬಂಡಾಯದ ಮೂಲಕ ಅವರ ಸರ್ಕಾರವನ್ನು ಕೆಡವಲಾಗಿತ್ತು.