ನವದೆಹಲಿ: ಲಂಡನ್ನ ಭಾರತದ ಹೈಕಮಿಷನ್ ಕಚೇರಿಯಲ್ಲಿ ಖಲಿಸ್ತಾನಿ ಪರ ಗುಂಪುಗಳು ತ್ರಿವರ್ಣ ಧ್ವಜವನ್ನು ಕಿತ್ತೊಗೆದಿರುವ ಆರೋಪದ ನಂತರ ದೆಹಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾನುವಾರ ತಡರಾತ್ರಿ ಭಾರತದಲ್ಲಿನಯುಕೆ ರಾಜತಾಂತ್ರಿಕರನ್ನು ಕರೆಸಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತು.
ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಈ ಕುರಿತು ಟ್ವೀಟ್ ಮಾಡಿದ್ದು, ಭಾರತ ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಖಲಿಸ್ತಾನಿ ತೀವ್ರಗಾಮಿ ಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಸರ್ಕಾರದ ಕ್ರಮ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಲಂಡನ್ನಲ್ಲಿರುವ ಖಲಿಸ್ತಾನಿ ಪರ ಗುಂಪುಗಳು ಭಾರತದ ಹೈಕಮಿಷನ್ ಕಚೇರಿಯಲ್ಲಿ ತ್ರಿವರ್ಣ ಧ್ವಜ ಕಿತ್ತೆಸಿದಿದ್ದವು. ಈ ನಿಟ್ಟಿನಲ್ಲಿ ಭದ್ರತಾ ಲೋಪಕ್ಕೆ ವಿವರಣೆ ನೀಡುವಂತೆ ಕೋರಲಾಗಿದೆ ಎಂದು ಎಂಇಎ ಹೇಳಿದೆ