ನವದೆಹಲಿ: ‘ಭಾರತ’ವು 5,000 ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ. ಮುಂದೆಯೂ ಕೂಡ ದೇಶದ ಜನರು ಒಗ್ಗಟ್ಟಾಗಿ ಉಳಿದು ವಿಶ್ವದ ಮುಂದೆ ಮಾನವ ನಡವಳಿಕೆಯ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಆರ್ಎಸ್ಎಸ್ನ ಹಿರಿಯ ಮುಖಂಡ ರಂಗಾ ಹರಿ ಬರೆದಿರುವ ‘ಪೃಥ್ವಿ ಸೂಕ್ತ – ಆನ್ ಓಡ್ ಟು ಮದರ್ ಅರ್ಥ್’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಜನರು ತಮ್ಮ ತಾಯ್ನಾಡಿನ ಬಗ್ಗೆ ಭಕ್ತಿ, ಪ್ರೀತಿ ಮತ್ತು ಸಮರ್ಪಣಾಭಾವನೆಯನ್ನು ಹೊಂದಬೇಕು ಎಂದರು. ನಮ್ಮ 5,000 ವರ್ಷಗಳ ಸಂಸ್ಕೃತಿಯೇ ಜಾತ್ಯತೀತವಾಗಿದೆ. ಇಡೀ ಜಗತ್ತು ಒಂದೇ ಕುಟುಂಬ, ಇದು ನಮ್ಮ ಭಾವನೆ. ಇದು ಕೇವಲ ಸಿದ್ಧಾಂತವಲ್ಲ ಎಂಬುದನ್ನು ಅರಿತುಕೊಳ್ಳಿ ಅದರಂತೆ ನಡೆದುಕೊಳ್ಳಿ ಎಂದು ಹೇಳಿದರು.
“ದೇಶದ ತುಂಬಾ ವೈವಿಧ್ಯತೆಯಿದೆ. ಆದರೆ ನಾವು ಒಂದೇ ಎಂದು ಜಗತ್ತಿಗೆ ಕಲಿಸುವ ಸಾಮರ್ಥ್ಯವಿರುವ ದೇಶವನ್ನಾಗಿ ಮಾಡಿ ಎಂದರು. ನಮ್ಮ ಜನರು ಮೆಕ್ಸಿಕೋದಿಂದ ಸೈಬೀರಿಯಾದವರೆಗೆ ಜ್ಞಾನವನ್ನು ಹರಡುತ್ತಾ ಹೋದರು ಎಂದರು. ಅದೇ ರೀತಿ ಆರ್ಥಿಕ ವಿಷಯಗಳ ಕುರಿತು ಚರ್ಚಿಸುವ ವೇದಿಕೆಯಾದ ಜಿ 20 ಅನ್ನು ಮಾನವೀಯತೆಯ ಬಗ್ಗೆ ಯೋಚಿಸುವ ವೇದಿಕೆಯಾಗಿ ಪರಿವರ್ತಿಸುವ ಭಾರತದ ನಿಲುವಿನಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಭಾಗವತ್ ಹೇಳಿದರು.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕೂಡ ಕಾರ್ಯಕ್ರಮದಲ್ಲಿದ್ದರು.