ನವದೆಹಲಿ: ಮಾಲ್ಡೀವ್ಸ್ ಪ್ರಜೆಗಳ ಪರವಾಗಿ ದ್ವೀಪದ ಮಾಜಿ ಅಧ್ಯಕ್ಷ ನಶೀದ್ ಕ್ಷಮೆ ಯಾಚಿಸಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷನಾಗಿ ಚೀನಾ ಪರ ನಾಯಕ ಮುಯಿಜು಼ ಆಯ್ಕೆಯಾದಂದಿನಿಂದ ಅವರು ಭಾರತದ ಹಿತಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದು, ಅಲ್ಲಿನ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ನಶೀದ್, ಭಾರತೀಯರು ಪ್ರವಾಸೀ ತಾಣವಾಗಿ ಮಾಲ್ಡೀವ್ಸ್ ಅನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಮಾಲ್ಡೀವ್ಸ್ನಲ್ಲಿರುವ ಭಾರತೀಯ ಅಧಿಕಾರಿಗಳು ಜಾಗ ಖಾಲಿ ಮಾಡಬೇಕು ಎಂದು ಮುಯಿಜು಼ ಸರ್ಕಾರ ಒತ್ತಾಯಿಸಿತ್ತು.
ಇದರ ಬಗ್ಗೆ ಮಾತನಾಡಿದ ನಶೀದ್, ಮಾಲ್ಡೀವ್ಸ್ ಜನರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಮೊದಲಿನಂತೆ ಭಾರತೀಯರು ರಜಾದಿನಗಳನ್ನು ಕಳೆಯಲು ಮಾಲ್ಡೀವ್ಸ್ಗೆ ಭೇಟಿಕೊಡಬೇಕು. ಅವರ ಪ್ರತಿ ನಮ್ಮ ಆತಿಥ್ಯ ಮೊದಲಿನಂತೆಯೇ ಇರುತ್ತದೆ ಎಂದರು.