ನವದೆಹಲಿ: ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಿಂದ ಭಾರತಕ್ಕೆ ತಂದಿದ್ದ ಚಿರತೆಗಳ ಸರಣಿ ಸಾವು ಆಗುತ್ತಿದೆ. ಕಳೆದ ದಿನ ಸಾವನ್ನಪ್ಪಿರುವ ಧಾತ್ರಿ ಎಂಬ ಹೆಣ್ಣು ಚಿರತೆಯ ಸಾವಿಗೆ ಕಾರಣ ಹುಡುಕಲು ಅರಣ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಈ ಬೆನ್ನಲ್ಲೇ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ದಕ್ಷಿಣ ಆಫ್ರಿಕಾದ ತಜ್ಞರು ಕನ್ಸರ್ನ್ ರೈಸ್ ಮಾಡಿದ್ದು, ಇ-ಮೇಲ್ ಮೂಲಕ ಸುಪ್ರೀಂ ಕೋರ್ಟ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಎರಡು ಪ್ರತ್ಯೇಕ ಪತ್ರಗಳನ್ನು ಸುಪ್ರೀಂ ಕೋರ್ಟ್ ಗೆ ಬಂದಿವೆ. ಕುನೋ ಅಭಯಾರಣ್ಯದಲ್ಲಿರುವ ಚಿರತೆಗಳ ನಿರ್ವಹಣೆ ಸಂಬಂಧ ಎರಡು ಪತ್ರಗಳು ಬಂದಿವೆ.
ಈ ಪತ್ರದಲ್ಲಿ ಎಕ್ಸ್ಪರ್ಟ್, ಚೀತಾ ಪ್ರಾಜೆಕ್ಟ್ ಅನ್ನು ಸಂಪೂರ್ಣವಾಗಿ ಭಾರತದಲ್ಲಿರುವ ತಜ್ಞರ ಸಮಿತಿ ನಿರ್ಲಕ್ಷ್ಯ ಮಾಡಿದೆ. ಅವುಗಳನ್ನು ಕಾಪಾಡಿಕೊಳ್ಳಲು ಗಂಭೀರವಾಗಿ ಕೆಲಸ ಮಾಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾತ್ರವಲ್ಲ, ಉಳಿದಿರುವ ಚಿರತೆಗಳನ್ನು ರಕ್ಷಿಸಿಕೊಳ್ಳಲು ಅಲ್ಲಿರುವ ತಜ್ಞರು ತುರ್ತು ಕೆಲಸಗಳನ್ನು ಮಾಡಬೇಕಾಗಿದೆ. ಉಳಿದ ಎಲ್ಲಾ ಚಿರತೆಗಳನ್ನು ತಪಾಸಣೆಗೆ ಒಳಪಡಿಸಬೇಕಾಗಿದೆ. ಜೊತೆಗೆ ಈಗಿರುವ ಪರಿಣಿತರ ಬದಲಾಗಿ ಚೀತಾ ಪ್ರಾಜೆಕ್ಟ್ ಬಗ್ಗೆ ಅನುಭವ ಇರೋರನ್ನು ಅವುಗಳ ಆರೈಕೆಗೆ ಬಿಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.