News Karnataka Kannada
Sunday, April 28 2024
ದೆಹಲಿ

ದ.ಆಫ್ರಿಕಾದಿಂದ ಬಂದ 9 ಚಿರತೆಗಳು ಸಾವು: ಸುಪ್ರೀಂ ಅಂಗಳಕ್ಕೆ ತಲುಪಿದ ಕೇಸ್

cheetah deaths
Photo Credit : News Kannada

ನವದೆಹಲಿ:  ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಿಂದ ಭಾರತಕ್ಕೆ ತಂದಿದ್ದ ಚಿರತೆಗಳ ಸರಣಿ ಸಾವು ಆಗುತ್ತಿದೆ. ಕಳೆದ ದಿನ ಸಾವನ್ನಪ್ಪಿರುವ ಧಾತ್ರಿ ಎಂಬ ಹೆಣ್ಣು ಚಿರತೆಯ ಸಾವಿಗೆ ಕಾರಣ ಹುಡುಕಲು ಅರಣ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಈ ಬೆನ್ನಲ್ಲೇ ಪ್ರಕರಣವು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ.

ದಕ್ಷಿಣ ಆಫ್ರಿಕಾದ ತಜ್ಞರು ಕನ್ಸರ್ನ್​ ರೈಸ್ ಮಾಡಿದ್ದು, ಇ-ಮೇಲ್ ಮೂಲಕ ಸುಪ್ರೀಂ ಕೋರ್ಟ್​ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಎರಡು ಪ್ರತ್ಯೇಕ ಪತ್ರಗಳನ್ನು ಸುಪ್ರೀಂ ಕೋರ್ಟ್ ಗೆ ಬಂದಿವೆ. ಕುನೋ ಅಭಯಾರಣ್ಯದಲ್ಲಿರುವ ಚಿರತೆಗಳ ನಿರ್ವಹಣೆ ಸಂಬಂಧ ಎರಡು ಪತ್ರಗಳು ಬಂದಿವೆ.

ಈ ಪತ್ರದಲ್ಲಿ ಎಕ್ಸ್​​ಪರ್ಟ್​, ಚೀತಾ ಪ್ರಾಜೆಕ್ಟ್​​ ಅನ್ನು ಸಂಪೂರ್ಣವಾಗಿ ಭಾರತದಲ್ಲಿರುವ ತಜ್ಞರ ಸಮಿತಿ ನಿರ್ಲಕ್ಷ್ಯ ಮಾಡಿದೆ. ಅವುಗಳನ್ನು ಕಾಪಾಡಿಕೊಳ್ಳಲು ಗಂಭೀರವಾಗಿ ಕೆಲಸ ಮಾಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾತ್ರವಲ್ಲ, ಉಳಿದಿರುವ ಚಿರತೆಗಳನ್ನು ರಕ್ಷಿಸಿಕೊಳ್ಳಲು ಅಲ್ಲಿರುವ ತಜ್ಞರು ತುರ್ತು ಕೆಲಸಗಳನ್ನು ಮಾಡಬೇಕಾಗಿದೆ. ಉಳಿದ ಎಲ್ಲಾ ಚಿರತೆಗಳನ್ನು ತಪಾಸಣೆಗೆ ಒಳಪಡಿಸಬೇಕಾಗಿದೆ. ಜೊತೆಗೆ ಈಗಿರುವ ಪರಿಣಿತರ ಬದಲಾಗಿ ಚೀತಾ ಪ್ರಾಜೆಕ್ಟ್ ಬಗ್ಗೆ ಅನುಭವ ಇರೋರನ್ನು ಅವುಗಳ ಆರೈಕೆಗೆ ಬಿಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು