ನವದೆಹಲಿ: ಭಾರತ ಕೆನಡಾ ನಡುವೆ ವಿವಾದ ತೀವ್ರಗೊಂಡಿದೆ. ಜಿ20 ರಾಷ್ಟ್ರಗಳ ಸಂಸತ್ ಸ್ಪೀಕರ್ಗಳ ಶೃಂಗಸಭೆಯಿಂದ ಹೊರಗುಳಿಯಲು ಕೆನಡಾದ ಸೆನೆಟ್ನ ಸ್ಪೀಕರ್ ನಿರ್ಧರಿಸಿದ್ದಾರೆ. ಈ ನಡುವೆ ಖಲಿಸ್ತಾನಿ ಉಗ್ರರಿಂದ ಸಚಿವ ಜೈಶಂಕರ್ ಗೆ ಬೆದರಿಕೆ ಇರುವ ಹಿನ್ನಲೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಭದ್ರತೆಯನ್ನು ಸರ್ಕಾರ ಹೆಚ್ಚಿಸಿದೆ.
ಸಚಿವರ ಭದ್ರತೆಯನ್ನು ಗುರುವಾರ ‘Z’ ವರ್ಗಕ್ಕೆ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಜೈಶಂಕರ್ ಇಲ್ಲಿಯವರೆಗೆ ‘ವೈ’ ಭದ್ರತೆಯನ್ನು ಪಡೆದಿದ್ದರು.
ಬೆದರಿಕೆಯ ವರದಿಯ ಆಧಾರದ ಮೇಲೆ ಕೇಂದ್ರ ಗೃಹ ಸಚಿವಾಲಯವು ವಿದೇಶಾಂಗ ಸಚಿವ ಜೈಶಂಕರ್ ಅವರ ಭದ್ರತೆಯನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ವಿದೇಶಾಂಗ ಸಚಿವರಿಗೆ ದೆಹಲಿ ಪೊಲೀಸ್ ಕಮಾಂಡೋಗಳು ವೈ ಕೆಟಗರಿ ಭದ್ರತೆ ಒದಗಿಸಿದ್ದರು.