ನವದೆಹಲಿ: ಉತ್ತರ ಭಾರತದಲ್ಲಿ ದಟ್ಟವಾದ ಮಂಜುವಿನಿಂದ ಸಂಚಾರಕ್ಕೆ ಅಡ್ಡಿಯುಂಟು ಆಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ 110 ಕ್ಕೂ ಹೆಚ್ಚು ವಿಮಾನಗಳು ಹಾರಾಟದಲ್ಲಿ ಬದಲಾಣೆಗಳು ಆಗಿವೆ.
ಶೀತ ಅಲೆಯ ಪರಿಸ್ಥಿತಿಗಳಿಂದ ದೆಹಲಿಯಲ್ಲಿ ಮಂಜಿನ ಬಗ್ಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಜೊತೆಗೆ ದೆಹಲಿಗೆ ತೆರಳುವ 25 ರೈಲುಗಳು ವಿಳಂಬವಾಗಿವೆ. ರಸ್ತೆಗಳಲ್ಲಿ ಮಂಜು ಆವರಿಸಿದ್ದರಿಂದ ಉತ್ತರ ಪ್ರದೇಶದಾದ್ಯಂತ ಹಲವಾರು ಘರ್ಷಣೆಗಳಿಗೆ ಕಾರಣವಾಗಿದೆ. ಆಗ್ರಾ-ಲಖನೌ ಎಕ್ಸ್ಪ್ರೆಸ್ವೇಯಲ್ಲಿ ಬಹು ವಾಹನಗಳು ಡಿಕ್ಕಿ ಹೊಡೆದು ಒಬ್ಬರು ವ್ಯಕ್ತಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿರುಬ ಬಗ್ಗೆ ವರದಿಯಾಗಿದೆ.
ಪಂಜಾಬ್, ಹರಿಯಾಣ, ದೆಹಲಿ, ಯುಪಿ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ದಟ್ಟವಾದ ಮಂಜಿನ ಪರಿಸ್ಥಿತಿ ಉಂಟಾಗುತ್ತದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಉತ್ತರ ಭಾರತದ ಹಲವಾರು ನಗರಗಳು ಮಂಜಿನ ವಾತಾವರಣದಿಂದ ಕೊಡಿದೆ. ಪಟಿಯಾಲ, ಲಖನೌ ಮತ್ತು ಪ್ರಯಾಗ್ರಾಜ್ನಲ್ಲಿ 25 ಮೀಟರ್ನಷ್ಟು ಕಡಿಮೆ ಗೋಚರತೆ ದಾಖಲಾಗಿದ್ದರೆ, ಅಮೃತಸರದಲ್ಲಿ ಅದು 0 ಮೀಟರ್ಗೆ ಇಳಿದಿದೆ ಎಂದೂ ತಿಳಿದುಬಂದಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗುವ ನಿರೀಕ್ಷೆಯಿದೆ.