News Karnataka Kannada
Monday, April 29 2024
ದೆಹಲಿ

ದೆಹಲಿ: ಅಂತಾರಾಜ್ಯ ಬಸ್ಸು ನಿಲ್ದಾಣದಲ್ಲಿ 2,200 ಸಜೀವ ಗುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು

Police
Photo Credit : IANS

ದೆಹಲಿ: ಆನಂದ ವಿಹಾರ್‌ನ ಅಂತಾರಾಜ್ಯ ಬಸ್ಸು ನಿಲ್ದಾಣದಿಂದ ದಿಲ್ಲಿ ಪೊಲೀಸರು 2,200 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಆರು ಮಂದಿಯನ್ನು ಬಂಧಿಸಿದ್ದಾರೆ.

ಈ ಬೆಳವಣಿಗೆಯ ಬೆನ್ನಿಗೇ ಎಲ್ಲೆಡೆ ಭದ್ರತೆ ತೀವ್ರಗೊಳಿಸಲಾಗಿದ್ದು, ಹೊಟೇಲ್‌ಗಳು, ಗೆಸ್ಟ್ ಹೌಸ್‌ಗಳು, ಪಾರ್ಕಿಂಗ್ ಕೇಂದ್ರಗಳು, ರೆಸ್ಟೋರೆಂಟ್‌ಗಳನ್ನು ಮತ್ತು ಅಲ್ಲಿನ ಸಿಬ್ಬಂದಿಗಳನ್ನು ತಪಾಸಣೆಗೊಳಪಡಿಸಲಾಗಿದೆ.

ದಿಲ್ಲಿ ಪೊಲೀಸರು 400ಕ್ಕೂ ಅಧಿಕ ಕೈಟ್ ಕ್ಯಾಚರ್‌ಗಳು ಮತ್ತು ಫ್ಲೈಯರ್‌ಗಳನ್ನು ಛಾವಣಿಗಳ ಮೇಲೆ ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸುವ ಮೂಲಕ ವಾಯುಮಾರ್ಗದಲ್ಲಿ ಎದುರಾಗುವ ಯಾವುದೇ ಅಪಾಯ ತಪ್ಪಿಸಲು ಕ್ರಮ ಕೈಗೊಂಡಿದ್ದಾರೆ.

ಅಂದು ತ್ರಿವರ್ಣ ಧ್ವಜಾರೋಹಣ ನಡೆಯುವವರೆಗೂ ಕೆಂಪುಕೋಟೆಯ ಸುತ್ತ 5ಕಿ.ಮೀ. ಪ್ರದೇಶದಲ್ಲಿ ಗಾಳಿಪಟ ಹಾರಾಟ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ. ಡಿಆರ್‌ಡಿಒದ ಡ್ರೋಣ್ ನಿರೋಧಕ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು