ನವದೆಹಲಿ: ಚಂದ್ರಯಾನ ಯಶಸ್ವಿಯಾಗಿದ್ದು, 140 ಕೋಟಿ ಭಾರತೀಯರ ಕನಸು ನನಸಾಗಿದೆ. ಇದೇ ವೇಳೆ ಪ್ರಧಾನಿ ದಕ್ಷಿಣ ಆಫ್ರಿಕಾದಿಂದಲೇ ಚಂದ್ರಯಾನ ಯಶಸ್ಸಿನ ಕುರಿತು ಅಭಿನಂದನೆ ಸಲ್ಲಿಸಿ ಭಾಷಣ ಮಾಡಿದ್ದರು. ನವ ಭಾರತದ ಜಯಘೋಷ್ ಇದೀಗ ಆರಂಭವಾಗಿದೆ.
140 ಕೋಟಿ ಹೃದಯದ ಸಂತಸದ ಧ್ವನಿಯನ್ನು ನಾವು ಕೇಳುತ್ತಿದ್ದೇವೆ. ನವ ವಿಶ್ವಾಸದ ಪ್ರತೀಕವಾಗಿ ಚಂದ್ರಯಾನ ಮೂಡಿಬಂದಿದೆ.
ನಾವು ಚಂದ್ರಯಾನಕ್ಕಾಗಿ ಭೂಮಿಯಲ್ಲಿ ಸಂಕಲ್ಪ ಕೈಗೊಂಡಿದ್ದು. ಚಂದ್ರನಲ್ಲಿ ಸಕಾರವಾಗಿದೆ. ನಾನು ಬ್ರಿಕ್ಸ್ ಸಭೆಗಾಗಿ ದಕ್ಷಿಣ ಆಫ್ರಿಕಾದಲ್ಲಿದ್ದೇನೆ. ಆದರೆ ದೇಶವಾಸಿಗಳಂತೆ ನನ್ನ ಮನಸ್ಸು ಚಂದ್ರಯಾನದಲ್ಲಿದೆ. ಪ್ರತಿ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದೆ ಎಂದಿದ್ದರು. ಇದೀಗ ಚಂದ್ರಯಾನ ಯಶಸ್ಸಿನ ಕೇಂದ್ರವಾದ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆ.26ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.