News Karnataka Kannada
Friday, May 03 2024
ದೆಹಲಿ

ವಿಚಾರಣೆ ಮುನ್ನ ದೀರ್ಘ ಕಾಲ ಜೈಲಿನಲ್ಲಿ ಆರೋಪಿಗಳನ್ನು ಇರಿಸುವಂತಿಲ್ಲ: ಸುಪ್ರೀಂ

ದಿಲ್ಲಿ ಅಬಕಾರಿ ನೀತಿ ಹಗರಣದೊಂದಿಗೆ ಸಂಬಂಧ ಹೊಂದಿದ ಜಗತ್ತಿನ ಅತಿ ದೊಡ್ಡ ಆಲ್ಕೋಹಾಲ್ ಯುಕ್ತ ಪಾನೀಯಗಳ ಕಂಪೆನಿಗಳಲ್ಲಿ ಒಂದರ ಅಂಗ ಸಂಸ್ಥೆಯಾದ ಪೆರ್ನೋಡ್ ರಿಚರ್ಡ್ ಇಂಡಿಯಾದ ಹಿರಿಯ ಕಾರ್ಯನಿರ್ವಹಣಾಧಿಕಾರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿದೆ.
Photo Credit : News Kannada

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣದೊಂದಿಗೆ ಸಂಬಂಧ ಹೊಂದಿದ ಜಗತ್ತಿನ ಅತಿ ದೊಡ್ಡ ಆಲ್ಕೋಹಾಲ್ ಯುಕ್ತ ಪಾನೀಯಗಳ ಕಂಪೆನಿಗಳಲ್ಲಿ ಒಂದರ ಅಂಗ ಸಂಸ್ಥೆಯಾದ ಪೆರ್ನೋಡ್ ರಿಚರ್ಡ್ ಇಂಡಿಯಾದ ಹಿರಿಯ ಕಾರ್ಯನಿರ್ವಹಣಾಧಿಕಾರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿದೆ.

ಪ್ರಾದೇಶಿಕ ಜನರಲ್ ಮ್ಯಾನೇಜರ್ ಬಿನೋಯ್ ಬಾಬು ಅವರಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ, ‘ನೀವು ವಿಚಾರಣೆಯ ಮುನ್ನ ಜನರನ್ನು ದೀರ್ಘ ಕಾಲ ಕಂಬಿಯ ಹಿಂದೆ ಇರಿಸಲು ಸಾಧ್ಯವಿಲ್ಲ. ಇದು ಸರಿಯಾದ ಕ್ರಮ ಅಲ್ಲ’ ಎಂದು ಹೇಳಿದೆ.

‘ಇದು ಹೇಗೆ ನಡೆಯುತ್ತದೆ ಎಂದು ನಮಗೆ ಇನ್ನೂ ತಿಳಿದಿಲ್ಲ. ಕೇಂದ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯದ ಆರೋಪಗಳ ನಡುವೆ ವಿರೋಧಾಭಾಸವಿದೆ’ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಅಭಿಪ್ರಾಯಪಟ್ಟರು. ಅವರು ಈಗಾಗಲೇ 13 ತಿಂಗಳು ಕಾಲ ಕಾರಾಗೃಹದಲ್ಲಿ ಇದ್ದರು ಎಂಬುದನ್ನು ಹಾಗೂ ಅವರ ಅರ್ಜಿಯಲ್ಲಿ ಎತ್ತಲಾದ ವಾಸ್ತವ ಸನ್ನಿವೇಶಗಳ ಆಧಾರವನ್ನು ಗಮನಿಸಿದ ಬಳಿಕ ನ್ಯಾಯಮೂರ್ತಿ ಎಸ್ವಿಎನ್ ಭಟ್ ಅವರನ್ನು ಕೂಡ ಒಳಗೊಂಡ ಪೀಠ ಬಾಬುಗೆ ಜಾಮೀನು ನೀಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು