ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣದೊಂದಿಗೆ ಸಂಬಂಧ ಹೊಂದಿದ ಜಗತ್ತಿನ ಅತಿ ದೊಡ್ಡ ಆಲ್ಕೋಹಾಲ್ ಯುಕ್ತ ಪಾನೀಯಗಳ ಕಂಪೆನಿಗಳಲ್ಲಿ ಒಂದರ ಅಂಗ ಸಂಸ್ಥೆಯಾದ ಪೆರ್ನೋಡ್ ರಿಚರ್ಡ್ ಇಂಡಿಯಾದ ಹಿರಿಯ ಕಾರ್ಯನಿರ್ವಹಣಾಧಿಕಾರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿದೆ.
ಪ್ರಾದೇಶಿಕ ಜನರಲ್ ಮ್ಯಾನೇಜರ್ ಬಿನೋಯ್ ಬಾಬು ಅವರಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ, ‘ನೀವು ವಿಚಾರಣೆಯ ಮುನ್ನ ಜನರನ್ನು ದೀರ್ಘ ಕಾಲ ಕಂಬಿಯ ಹಿಂದೆ ಇರಿಸಲು ಸಾಧ್ಯವಿಲ್ಲ. ಇದು ಸರಿಯಾದ ಕ್ರಮ ಅಲ್ಲ’ ಎಂದು ಹೇಳಿದೆ.
‘ಇದು ಹೇಗೆ ನಡೆಯುತ್ತದೆ ಎಂದು ನಮಗೆ ಇನ್ನೂ ತಿಳಿದಿಲ್ಲ. ಕೇಂದ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯದ ಆರೋಪಗಳ ನಡುವೆ ವಿರೋಧಾಭಾಸವಿದೆ’ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಅಭಿಪ್ರಾಯಪಟ್ಟರು. ಅವರು ಈಗಾಗಲೇ 13 ತಿಂಗಳು ಕಾಲ ಕಾರಾಗೃಹದಲ್ಲಿ ಇದ್ದರು ಎಂಬುದನ್ನು ಹಾಗೂ ಅವರ ಅರ್ಜಿಯಲ್ಲಿ ಎತ್ತಲಾದ ವಾಸ್ತವ ಸನ್ನಿವೇಶಗಳ ಆಧಾರವನ್ನು ಗಮನಿಸಿದ ಬಳಿಕ ನ್ಯಾಯಮೂರ್ತಿ ಎಸ್ವಿಎನ್ ಭಟ್ ಅವರನ್ನು ಕೂಡ ಒಳಗೊಂಡ ಪೀಠ ಬಾಬುಗೆ ಜಾಮೀನು ನೀಡಿತು.