News Karnataka Kannada
Monday, May 13 2024
ದೆಹಲಿ

ಪುಲ್ವಾಮ ದಾಳಿಗೆ 4 ವರ್ಷ, ವೀರ ಯೋಧರ ನೆನಪು ಅಮರ

4 years after Pulwama attack, memories of our brave soldiers
Photo Credit : Facebook

ನವದೆಹಲಿ: ಫೆಬ್ರವರಿ 14 ದೇಶವಾಸಿಗಳಿಗೆ ಅತೀವ ದುಃಖಕರ ದಿನ. 14 ಫೆಬ್ರವರಿ 2019ರಂದು ಪುಲ್ವಾಮದಲ್ಲಿ ಭಾರತೀಯ ಸೇನಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ವೀರಮರಣ ಹೊಂದಿದ್ದು, ಭಾರತೀಯರು ಎಂದು ಮರೆಯಲಾರದ ಘಟನೆಯಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ನಲವತ್ತು ಸಿಆರ್‌ಪಿಎಫ್‌ ಯೋಧರು ಪ್ರಯಾಣಿಸುತ್ತಿದ್ದ ಎರಡು ಬಸ್‌ಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್‌ ದಾಳಿ ನಡೆಸಲಾಗಿತ್ತು. ದಕ್ಷಿಣ ಕಾಶ್ಮೀರದ ಪುಲ್ವಾಮಾ ಹೆದ್ದಾರಿಯಲ್ಲಿ ಹೋಗುತ್ತಿದ್ದ ಅರೆಸೇನಾಪಡೆಯ ವಾಹನಗಳ ಕಾನ್ವಯ್‌ ಮೇಲೆ ದಾಳಿ ನಡೆದಿತ್ತು. ದಾಳಿಯ ಸ್ವಲ್ಪ ಸಮಯದ ನಂತರ ಜೈಶ್ ಇ ಮೊಹಮ್ಮದ್ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿತ್ತು.

ಬಾಲಾಕೋಟ್‌ ದಾಳಿ: ಸೈನಿಕರ ಸಾವಿನ ನಂತರ ಉಗ್ರರ ಮಹಾನ್‌ ಪೋಷಕ ಪಾಕಿಸ್ತಾನವನ್ನು ವಿವಿಧ ರಾಜತಾಂತ್ರಿಕ ಮಾರ್ಗಗಳ ಮೂಲಕ ಕಟ್ಟಿಹಾಕುವ ಸಮರ್ಥ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್‌ನ ಕುತಂತ್ರ ಬುದ್ಧಿ ಬಯಲಿಗೆ ಬರುವಂತಾಯಿತು. ಅಲ್ಲದೇ ಈ ವಿಚಾರದಲ್ಲಿ ಚೀನಾ ಹೊರತುಪಡಿಸಿ ಪಾಕ್‌ ಏಕಾಂಗಿಯಾಯಿತು.

ಬಳಿಕ ಫೆ.26 2019ರಂದು ವಾಯುಪಡೆಯ ಜೆಟ್‌ಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೆಇಎಂ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಉಗ್ರರ ಬೃಹತ್‌ ಶಿಬಿರವೊಂದು ಸಂಪೂರ್ಣ ನಾಶವಾಯಿತು. ಅಲ್ಲದೆ ವೀರಯೋಧರ ಮರಣಕ್ಕೆ ಪ್ರತೀಕಾರ ಪಡೆದಂತಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು