ಕಲುಷಿತಗೊಂಡಿರುವ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ದೆಹಲಿ ಸರ್ಕಾರ 6 ಅಂಶಗಳ ಯೋಜನೆ ಸಿದ್ಧಪಡಿಸಿದೆ. ಈ ಯೋಜನೆ 2025ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಈ ನದಿ ಕೊಳಕಾಗಲು 70 ವರ್ಷಬೇಕಾಯಿತು. ಎರಡು ದಿನಗಳಲ್ಲಿ ಈ ನದಿ ಸ್ವಚ್ಛ ಮಾಡಲು ಸಾಧ್ಯವಿಲ್ಲ. ಮುಂದಿನ ಚುನಾವಣೆ ವೇಳೆಗೆ ನದಿ ಸ್ವಚ್ಛಗೊಳಿಸಲಾಗುವುದು ಎಂದು ಜನರಿಗೆ ಭರವಸೆ ನೀಡಿದ್ದೆವು ಎಂದರು.
ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಸಾಮರ್ಥ್ಯ ಹೆಚ್ಚಿಸಿ, ಹೊಸದಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತದೆ. ಹಳೆಯ ಸಂಸ್ಕರಣಾ ಘಟಕಗಳ ತಂತ್ರಜ್ಞಾನ ಬದಲಾವಣೆ. ನದಿಗಳಿಗೆ ಸೇರುತ್ತಿರುವ ಜುಗ್ಗು ಜೋಪ್ರಿ ಕ್ಲಸ್ಟರ್ ಗಳ ತ್ಯಾಜ್ಯವನ್ನು ಒಳಚರಂಡಿಗೆ ವಿಲೀನಗೊಳಿಸುವುದು. ಒಳಚರಂಡಿ ಇಲ್ಲದ ಪ್ರದೇಶಗಳಿಗೆ ನಾಮಪತ್ರ ಶುಲ್ಕದಲ್ಲಿ ಒಳಚರಂಡಿ ಸಂಪರ್ಕ ಸ್ಥಾಪಿಸುವುದು ಎಂದರು.