News Karnataka Kannada
Saturday, May 04 2024
ದೆಹಲಿ

ಹಳೇ ದ್ವೇಷ ಹಿನ್ನೆಲೆಯಲ್ಲಿ ಸ್ನೇಹಿತರ ಹೊಡೆದಾಟ, ರಜೌರಿ ಗಾರ್ಡನ್ ಪ್ರದೇಶದಲ್ಲಿ ಗೆಳೆಯನಿಗೆ ಚಾಕು ಇರಿತ

Murder
Photo Credit :

ನವದೆಹಲಿ: ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ.ಹೇಮಂತ್(25) ಕೊಲೆಯಾದ ಯುವಕ.

ಹೇಮಂತ್ ತನ್ನ ಗೆಳೆಯ ನಿಖಿಲ್‍ನೊಂದಿಗೆ ಟೀ ಕುಡಿಯಲು ಅಂಗಡಿಗೆ ಹೋಗಿದ್ದಾರೆ. ಈ ವೇಳೆ ನಿಖಿಲ್‍ನ ಸ್ನೇಹಿತ ಆಗಮಿಸಿದ್ದು, ಇಬ್ಬರ ನಡುವೆ ಜಗಳ ಮಾಡಿಕೊಂಡು ಹೊಡೆದಾಟಕ್ಕಿಳಿದಿದ್ದಾರೆ.

ಈ ವೇಳೆ ನಿಖಿಲ್‍ನ ಸ್ನೇಹಿತ ಅಕಸ್ಮಾತಾಗಿ ಹೇಮಂತ್‍ಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರೊಳಗೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಖಿಲ್ ಮತ್ತು 18 ವರ್ಷದ ಆತನ ಸ್ನೇಹಿತನೊಂದಿಗೆ ಕಳೆದ ನ.17ರಂದು ಪಾರ್ಟಿಯೊಂದರಲ್ಲಿ ಕ್ಷುಲ್ಲಕ ವಿಷಯಕ್ಕಾಗಿ ಜಗಳ ನಡೆದಿತ್ತು.

ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಗಾಯಗೊಂಡಿರುವ ನಿಖಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು