News Karnataka Kannada
Monday, April 29 2024
ದೆಹಲಿ

ಸೈನ್ಯ ಧಾಮವು ದೇಶದ ಜನರಿಗೆ ಸೇನೆಗೆ ಸೇರಲು ಪ್ರೇರೇಪಿಸುತ್ತದೆ : ರಾಜನಾಥ್‌ ಸಿಂಗ್‌

New Project 2021 12 16t074126.293
Photo Credit :

ಡೆಹ್ರಾಡೂನ್‌: ಹುತಾತ್ಮ ಯೋಧರ ಸ್ಮರಣಾರ್ಥ ನಿರ್ಮಿಸಲಾಗುವ ಸೈನ್ಯ ಧಾಮವು ದೇಶದ ಜನರಿಗೆ ಸೇನೆಗೆ ಸೇರಲು ಪ್ರೇರೇಪಿಸುವುದರೊಂದಿಗೆ ಸೈನ್ಯದ ಬಗ್ಗೆ ಹೆಮ್ಮೆಯ ಭಾವನೆ ಹುಟ್ಟಿಸಲಿದೆ,ಚಾರ್‌ಧಾಮಗಳಂತೆ, ಹುತಾತ್ಮ ಸೈನಿಕರಿಗಾಗಿ ಸೈನ್ಯ ಧಾಮ್‌ ನಿರ್ಮಿಸುವುದಾಗಿ ಪ್ರಧಾನಿಯವರು ಘೋಷಿಸಿದ್ದರು. ಉತ್ತರಾಖಂಡದಾದ್ಯಂತ ಹುತಾತ್ಮರಾಗಿರುವ 1,734 ಯೋಧರ ಮನೆಯ ಮಣ್ಣನ್ನು ಸಂಗ್ರಹಿಸಲಾಗಿದ್ದು, ಅದನ್ನು ಈ ಧಾಮದ ಅಡಿಪಾಯಕ್ಕೆ ಬಳಸಲಾ ಗುವುದು. ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಬುಧವಾರ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಸೈನ್ಯಧಾಮಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಉತ್ತರಾ ಖಂಡವನ್ನು ಧೈರ್ಯವಂತರ ನಾಡು ಎಂದು ಪ್ರಶಂಶಿಸಿದ್ದಲ್ಲದೇ, ಇತ್ತೀಚೆಗೆ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಾವಿ ಗೀಡಾದ ರಕ್ಷಣ ಪಡೆಯ ಮುಖ್ಯಸ್ಥ ಜ|ಬಿಪಿನ್‌ ರಾವತ್‌ ಅವರನ್ನೂ ನೆನಪಿಸಿಕೊಂಡರು.

ಇನ್ನೊಂದೆಡೆ ಪಾಕ್‌ ಮತ್ತು ಭಾರತ ನಡುವಿನ ಯುದ್ಧಕ್ಕೆ 50 ವರ್ಷಗಳಾದ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗುರುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ವರ್ಷದ ಹಿಂದೆ ಅವರೇ ಆರಂಭಿಸಿದ್ದ “ಸ್ವರ್ಣಿಂ ವಿಜಯ ಜ್ಯೋತಿ’ಯನ್ನೂ ಈ ವೇಳೆ ಸ್ವೀಕರಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು