ಬೆಂಗಳೂರು : ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗ್ತಿದೆ. ಈ ನಡುವೆ ಹೊಸ ರೂಪಾಂತರಿ ಒಮಿಕ್ರಾನ್ ಆತಂಕ ಸೃಷ್ಟಿಸ್ತಿದೆ.ಇನ್ನು ಕೋವಿಡ್ ಕ್ಲಸ್ಟರ್ಗಳ ಪ್ರದೇಶಗಳಲ್ಲಿ ಕಾರ್ಯ ತಂತ್ರಗಳನ್ನ ಅನುಸರಿಸುವಂತೆ ಸೂಚಿಸಿದ ಕೇಂದ್ರ ಸರ್ಕಾರ, ನೈಟ್ ಕರ್ಫ್ಯೂ, ಜನಜಂಗುಳಿ ನಿರ್ಬಂಧಿಸಲು ತಿಳಿಸಿದೆ ಈಗಲೇ ಹೆಚ್ಚೆತ್ತುಕೊಳ್ಳದಿದ್ರೆ, ಅಪಾಯ ಖಂಡಿತ ಎಂದು ಮನಗೊಂಡಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಎಚ್ಚರಿಸಿದೆ.
ದೇಶದಲ್ಲಿ ಕಳೆದ 2 ವಾರಗಳಲ್ಲಿ ಕೋವಿಡ್ ಪಾಸಿಟಿವಿಟಿ ಹೆಚ್ಚಳದ ಹಿನ್ನೆಲೆಯಲ್ಲಿ ದೇಶದ ಎಲ್ಲ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯಕರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದು, ಕೊರೊನಾ ಕಟ್ಟಿ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಇನ್ನು ಸಭೆ, ಅಂತ್ಯಕ್ರಿಯೆ, ಮದುವೆಗಳಲ್ಲಿ ನಿರ್ಬಂಧಕ್ಕೆ ಸೂಚನೆ ನೀಡಿದ್ದು, ಕೊರೊನಾ ಮಟ್ಟಹಾಕಲು ಯಾವೆಲ್ಲಾ ಕ್ರಮಗಳನ್ನ ತೆಗೆದುಕೊಳ್ಳಬೇಕೊ ಅವುಗಳನ್ನ ಕಟ್ಟುನಿಟ್ಟಾಗಿ ಜಾರಿ ಮಾಡಿ ಎಂದಿದೆ.