ನವದೆಹಲಿ,ನ.11 : ಶಾರ್ಪ್ ಶೂಟರ್ ರಾಜೇಶ್ ಭವಾನಾ ಗ್ಯಾಂಗ್ನ ಇಬ್ಬರು ಸಹಚರರನ್ನು ದೆಹಲಿ ಪೊಲೀಸರು ಸಿನಿಮಿಯ ರೀತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಮುಂಜಾನೆ ಭವಾನಾ ಪ್ರಾಂತ್ಯದಲ್ಲಿ ಗ್ಯಾಂಗ್ನ ಇಬ್ಬರು ಸದಸ್ಯರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯಿತು.
ಘಟನೆಯಲ್ಲಿ ಮನ್ಬೀರ್ ಅಲಿಯಾಸ್ ರಾಂಚೋ ಕಾಲಿಗೆ ಗುಂಡೇಟು ಬಿತ್ತು. ಕೂಡಲೆ ಆತನನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೂತ್ಕುರ್ದ್ ಗ್ರಾಮದವನಾದ ಮನ್ಬೀರ್ನನ್ನು ಭವಾನಾ ಪೊಲೀಸರು ಅತ್ಯಂತ ಕ್ರೂರಿ ಎಂದು ಬಿಂಬಿಸಿದ್ದರು.
ಮನಬೀರ್ ಮತ್ತು ನರೇಶ್ ಎಂಬ ಶಾರ್ಪ್ ಶೂಟರ್ಗಳು ಆಸ್ತಿ ವಿವಾದದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದನ್ನು ಮನಗಂಡ ಪೊಲೀಸರು ಅವರನ್ನು ಬಂಸಲು ಮುಂದಾದಾಗಿ ಗುಂಡಿನ ಚಕಮಕಿ ನಡೆಯಿತು.
ಚಕಮಕಿಯಲ್ಲಿ ಗಾಯಗೊಂಡ ಮನ್ಬೀರ್ ಹಾಗೂ ನರೇಶ್ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.