‘ಪೆಗಾಸಸ್’ ತಂತ್ರಾಂಶ ಬಳಸಿ ಭಾರತದ ನೂರಾರು ಗಣ್ಯರ ಮೊಬೈಲ್ ಫೋನ್ ಕದ್ದಾಲಿಕೆ ನಡೆಸಲಾಗಿದೆ ಎಂಬ ಪ್ರಕರಣದ ತನಿಖೆಗೆ ತಾಂತ್ರಿಕ ತಜ್ಞರ ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ಮುಂದಾಗಿದೆ.
ಗುರುವಾರ ನ್ಯಾಯಪೀಠವು ಈ ವಿಚಾರ ತಿಳಿಸಿದ್ದು, ಹಾಗೆಯೇ ಮಧ್ಯಂತರ ಆದೇಶವನ್ನೂ ಮುಂದಿನ ವಾರವೇ ಹೊರಡಿಸುವುದಾಗಿ ಸ್ಪಷ್ಟಪಡಿಸಿದೆ. ಪೆಗಾಸಸ್ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿತ್ತು.
‘ಈ ವಾರವೇ ನಾವು ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಲು ಇಚ್ಛಿಸಿದ್ದೆವು. ಆದರೆ, ತಾಂತ್ರಿಕ ಸಮಿತಿಯಲ್ಲಿರುವ ಕೆಲವು ಸದಸ್ಯರು ವೈಯಕ್ತಿಕ ಕಾರಣದಿಂದ ಸಮಿತಿಯಲ್ಲಿ ಭಾಗವಹಿಸಲಿಲ್ಲ. ಹಾಗಾಗಿ ನಾವು ಮುಂದಿನ ವಾರ ಸಮಿತಿ ಅಂತಿಮಗೊಳಿಸುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ತಿಳಿಸಿದ್ದಾರೆ