ದೆಹಲಿ : ಕೋವಿಡ್ ಕಾರಣದಿಂದಾಗಿ ತಮ್ಮ ದೇಶಕ್ಕೆ ಮರಳಲಾಗದೇ ಭಾರತದಲ್ಲೇ ಸಿಲುಕಿದ್ದ 190 ಪಾಕಿಸ್ತಾನಿಯರನ್ನು ಅವರ ತಾಯ್ನಾಡಿಗೆ ಕಳುಹಿಸಿಕೊಡಲಾಗಿದೆ. ಕೊರೋನಾದಿಂದ ಗಡಿ ಮುಚ್ಚಿದ್ದ ಕಾರಣ ಇವರೆಲ್ಲರೂ ಭಾರತದಲ್ಲಿಯೇ ಉಳಿದುಕೊಂಡಿದ್ದರು. ಹಿಂದೂ ಮತ್ತು ಸಿಖ್ ಆರಾಧನಾಲಯಗಳಿಗೆ ಭೇಟಿ ನೀಡಲು ಇವರೆಲ್ಲರೂ ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ.
ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕ್ ಪ್ರಜೆಗಳನ್ನು ತಾಯ್ನಾಡಿಗೆ ಕಳುಹಿಸಲಾಗಿದೆ. ಪ್ರಜೆಗಳನ್ನು ಕಳಿಸುವ ಮುನ್ನ ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದ್ದು, ವೈದ್ಯಕೀಯ ಪ್ರಮಾಣಪತ್ರವನ್ನು ನೀಡಲಾಗಿದೆ. ಬರೋಬ್ಬರಿ ವರ್ಷದ ನಂತರ ತಮ್ಮೂರಿಗೆ ಮರಳುತ್ತಿರುವ ಪಾಕಿಸ್ತಾನಿಗಳ ಮುಖದಲ್ಲಿ ಸಂತಸ ಎದ್ದು ಕಾಣುತ್ತಿದೆ. ಭಾರತ ಸರ್ಕಾರ ಉಚಿತ ಊಟ, ವಸತಿ ಸೌಲಭ್ಯ ನೀಡಿದ್ದು, ಪ್ರಯಾಣದ ದಾಖಲೆಗಳನ್ನು ಸಿದ್ಧಪಡಿಸಲು ಸಹಾಯ ಮಾಡಿದೆ ಎಂದು ಪಾಕಿಸ್ತಾನ ಪ್ರಜೆಗಳು ಹೇಳಿದ್ದಾರೆ.