ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿಯಾದರು. ಪ್ರಧಾನಿ ಮೋದಿಯರ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಬಿಟ್ಕಾಯಿನ್ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ನಾನೇ ಪ್ರಸ್ತಾಪ ಮಾಡಿದೇ, ಇದರ ಬಗ್ಗೆ ಅದರ ಚರ್ಚೆ ಬೇಡ ನಿಮ್ಮ ಕೆಲಸವನ್ನು ನೀವು ಮಾಡಿ ಅಂತ ಹೇಳಿದ್ದರು ಅಂತ ಸಿಎಂ ತಿಳಿಸಿದರು.
ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರಿಸಿ, ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರಿಗೆ ಬರುವಂತೆ ಮನವಿ ಮಾಡಿದ್ದು, ಈ ವೇಳೆ ನಾನು ಡಿಸೆಂಬರ್ ತಿಂಗಳಿನಲ್ಲಿ ಎರಡು ಬಾರಿ ಬರುವೆ ಹೀಗಾಗಿ ಒಂದು ಬಾರಿ ಎರಡು ಕಾರ್ಯಕ್ರಮಗಳನ್ನು ಮಾಡಿ ಅಂತ ತಿಳಿಸಿದರು.
ಬೆಂಗಳೂರು ಸರ್ಬನ್ ರೈಲ್ವೆ, ಅಂಬೇಡ್ಕರ್ ಸೂಲ್ಕ್ ಆಫ್ ಎಕನಾಮಿಕ್ಸ್, ಐಟಿಐ ಕಾಲೇಜುಗಳ ಉನ್ನತಿಕರಣ, ಬೆಂಗಳೂರಿನ ವಿವಿಧ ಅಭಿವೃದ್ದಿಗಳಿಗೆ ಚಾಲನೆ ನೀಡುವುದಕ್ಕೆ ಆಹ್ವಾನ ನೀಡಲಾಗುವುದು ದಿನಾಂಕವು ಶೀಘ್ರದಲ್ಲಿ ನಿಗದಿ ಮಾಡಲಾಗುವುದು ಅಂತ ಹೇಳಿದರು.
ನಾವು ನೂರು ದಿನಗಳಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಅದರಲ್ಲೂ ರೈತರ ಮಕ್ಕಳಿಗೆ ಜಾರಿಗೆ ತಂದಿರುವ ಸ್ಕಾಲರ್ ಶಿಪ್ ಯೋಜನೆ ಬಗ್ಗೆ ಮೆಚ್ಚುಗೆ ದೇಶದಲ್ಲಿ ಇದು ಜಾರಿಗೆ ತರಲು ಸಹಾಯವಾಗುತ್ತದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದರು. ಟೆಂಡರ್ಗೆ ಸಂಬಂಧಪಟ್ಟಂತೆ ನಮ್ಮ ಸರ್ಕಾರದ ನೂತನ ವ್ಯವಸ್ಥೆ ಬಗ್ಗೆ ಸುದೀರ್ಘವಾದ ಚರ್ಚೆಯನ್ನು ನಡೆಸಲಾಯಿತು, ಇದೇ ವೇಳೆ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೆ ಅವರು ಸೂಚನೆ ನೀಡಿದರು.
ಗ್ರಾಮಪಂಚಾಯತಿಯಲ್ಲಿ ಕೆಲಸ ಮಾಡಲು ಕೇಂದ್ರದ ಸರ್ಕಾರದ ಸಹಕಾರ ವನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಿದ ಅವರು ಈ ಬಗ್ಗೆ ಕೆಲಸಗಳು ಸರಿಯಾಗಿ ನಡೆಯಲು ಹಿರಿಯ ಐಎಎಸ್ ಅಧಿಕಾರಿ ನೇಮಕ ಮಾಡುವಂತೆ ಸೂಚನೆ ನೀಡಿದರು ಅಂತ ಹೇಳಿದರು. ಮನೆ ಇಲ್ಲದವರಿಗೆ ಮನೆ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ, ಅವರು ಪ್ರಧಾನಿ ಮಂತ್ರಿ ಅವಾಜ್ ಘಟಕದ ಯೋಜನೆ ಅಡಿಯಲ್ಲಿ ಸೇರಿಸಿಕೊಂಡು ಮಾಡುವಂತೆ ಸೂಚನೆ ನೀಡಿದರು. ಎಸ್ಸಿಎಸ್ಟಿ ಹಾಗೂ ಹಿಂದುಳಿದ ಮಹಿಳೆಯರಿಗೆ ಬ್ಯಾಂಕ್ಗಳಿಂದ ಸೂಕ್ತವಾದ ಸಾಲವ್ಯವಸ್ಥೆ ನೀಡುವಂತೆ ಸೂಚನೆ ನೀಡುವೆ ಅಂತ ಸಿಎಂಗೆ ಭರವಸೆ ಅಂತ ತಿಳಿಸಿದರು.