ಹೊಸದಿಲ್ಲಿ: ವಾಯುಮಾಲಿನ್ಯದಿಂದ ಕಂಗೆಟ್ಟಿರುವ ದಿಲ್ಲಿಯಲ್ಲಿ ಗುರುವಾರವೂ ವಾಯು ಗುಣಮಟ್ಟ “ಅತ್ಯಂತ ಕಳಪೆ’ ಕೆಟಗರಿಗೆ ಇಳಿದಿದ್ದು.
ರವಿವಾರದಿಂದ ಬೀಸಲಿರುವ ಗಾಳಿಯು ನಾಗರಿಕರಿಗೆ ಮಾಲಿನ್ಯದಿಂದ ಸ್ವಲ್ಪಮಟ್ಟಿಗೆ ರಿಲೀಫ್ ನೀಡುವ ಸಾಧ್ಯತೆಯಿದೆ ಎಂದು ದಿಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಸರಕಾರವು ಕ್ರಮ ಕೈಗೊಳ್ಳಲು ಆರಂಭಿಸಿದ್ದು, ಗುರುವಾರ ಅತ್ಯಗತ್ಯ ಸಾಮಗ್ರಿ ಹೊತ್ತ ಟ್ರಕ್ಗಳು ಹೊರತುಪಡಿಸಿ ಉಳಿದವುಗಳಿಗೆ ದಿಲ್ಲಿ ಪ್ರವೇಶ ನಿರಾಕರಿಸಲಾಗಿದೆ.
ನ.20ರಿಂದ ಮೇಲ್ಮೆ ಗಾಳಿ ಬೀಸಲಿದ್ದು, ತದನಂತರ ಪರಿಸ್ಥಿತಿ ಸುಧಾರಿಸಲಿದೆ. ವಾಯುಗುಣಮಟ್ಟ “ಅತೀ ಕಳಪೆ’ಯಿಂದ “ಸಾಮಾನ್ಯ ಕಳಪೆ’ಗೆ ಇಳಿಯಲಿದೆ ಎಂದಿದ್ದಾರೆ.
ಈ ನಡುವೆ ದೀರ್ಘಾವಧಿ ವಾಯುಮಾಲಿನ್ಯದಿಂದ ಕೊರೊನಾ ಬೇಗನೆ ಹರಡುತ್ತದೆ ಎಂದು ಸ್ಪೇನ್ನಲ್ಲಿ ನಡೆಸಲಾದ ಅಧ್ಯಯನದಿಂದ ತಿಳಿದುಬಂದಿದೆ.