News Karnataka Kannada
Wednesday, May 01 2024
ದೆಹಲಿ

ನೀಟ್ ಪಿಜಿ 2021ವಿಳಂಬ: ಮುಷ್ಕರ ನಿರತ ವೈದ್ಯರು ದೆಹಲಿ ಪೊಲೀಸರ ವಶಕ್ಕೆ

Exam
Photo Credit :

ನೀಟ್ ಪಿಜಿ 2021ರ ಕೌನ್ಸಿಲಿಂಗ್ ವಿಳಂಬವಾಗುತ್ತಿರುವುದನ್ನು ಖಂಡಿಸಿ ರೆಸಿಡೆಂಟ್ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದ ರೆಸಿಡೆಂಟ್ ವೈದ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಸುಪ್ರೀಂ ಕೋರ್ಟ್‌ನತ್ತ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ರೆಸಿಡೆಂಟ್ ವೈದ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದ ಕುಪಿತರಾದ ವೈದ್ಯರು ಇಂದು ಕೇಂದ್ರ ಆರೋಗ್ಯ ಸಚಿವರ ಮನೆಗೆ ತೆರಳಲು ನಿರ್ಧರಿಸಿದ್ದರು.ಪೊಲೀಸರು ಇದೀಗ ಇವರನ್ನೂ ವಶಕ್ಕೆ ಪಡೆದಿದ್ದಾರೆ.

ದೆಹಲಿ ಪೊಲೀಸರು ಈಗಾಗಲೇ ರೆಸಿಡೆಂಟ್ ವೈದ್ಯರ ವಿರುದ್ಧ ಗಲಭೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಸೆಕ್ಷನ್‌ಗಳ ಅನ್ವಯ ಎಫ್‌ಐಆರ್ ದಾಖಲಿಸಿದ್ದಾರೆ. ಎಲ್ಲಾ ದಿನನಿತ್ಯದ ಹಾಗೂ ತುರ್ತುಸೇವೆಗಳಿಂದ ಸಂಪೂರ್ಣವಾಗಿ ವೈದ್ಯರು ಹಿಂದೆ ಸರಿದ 11 ದಿನದ ನಂತರ ಈ ರೀತಿ ಪ್ರತಿಭಟನೆಗೆ ಇಳಿದಿದ್ದಾರೆ. ತಮ್ಮ ಬೇಡಿಕೆಗಳು ಪೂರ್ಣವಾಗದ ಕಾರಣ ವೈದ್ಯರು ಬಿಳಿ ಕೋಟ್‌ಗಳನ್ನು ಅಧಿಕಾರಿಗಳಿಗೆ ಹಿಂದಿರುಗಿಸಿದ್ದಾರೆ.

ಕೋವಿಡ್ ವಾರಿಯರ‍್ಸ್‌ಗಳಿಗೆ ಇಲ್ಲಿ ಯಾವುದೇ ಗೌರವ ಇಲ್ಲ. ತಮ್ಮ ಪ್ರಾಣ ಪಣಕ್ಕಿಟ್ಟು ನಾವು ಕೆಲಸ ಮಾಡಿದ್ದೇವೆ. ನಮ್ಮನ್ನು ಈ ರೀತಿ ನಡೆಸಿಕೊಂಡಿರುವ ಶಾಕ್‌ನಿಂದ ನಾವಿನ್ನೂ ಹೊರಬಂದಿಲ್ಲ. ಮಹಿಳೆಯರೆಂದೂ ನೋಡದೇ ರಸ್ತೆಯಲ್ಲಿ ವೈದ್ಯೆಯರನ್ನು ಎಳೆದೊಯ್ದಿದ್ದಾರೆ. ಹಲವಾರು ವೈದ್ಯರು ಗಾಯಗೊಂಡಿದ್ದಾರೆ ಎಂದು ರೆಸಿಡೆಂಟ್ ವೈದ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಅನುಜ್ ಅಗರ್ವಾಲ್ ಆರೋಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು