ನವದೆಹಲಿ, ಮೇ.22: ನೈಋತ್ಯ ದಿಲ್ಲಿಯ ವಸಂತ್ ವಿಹಾರ್ ಪ್ರದೇಶದ ಫ್ಲಾಟ್ನಲ್ಲಿ ಕಳೆದ ರಾತ್ರಿ ಒಂದೇ ಕುಟುಂಬದ ಮೂವರ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಮಂಜು ಮತ್ತು ಆಕೆಯ ಪುತ್ರಿಯರಾದ ಅಂಶಿಕಾ ಮತ್ತು ಆಂಕ್ ಎಂದು ಗುರುತಿಸಲಾಗಿದೆ.
ವಸಂತ ಅಪಾಟ್ಮೆಂಟ್ ಫ್ಲಾಟ್ ಸಂಖ್ಯೆ 207ರಲ್ಲಿ ಒಳಗಿನಿಂದ ಲಾಕ್ ಮಾಡಲಾಗಿತ್ತು ಗ್ಯಾಸ್ ಲೀಕ್ ಅಗುತ್ತಿರುವ ಬಗ್ಗೆ ಅಕ್ಕ ಪಕ್ಕದ ಮನೆಯವರು ಅನುಮಾನಗೊಂಡು ಬಾಗಿಲು ತಟ್ಟಿದಾಗ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು, ಪೊಲೀಸರು ಬಾಗಿಲು ತೆರೆದು ಒಳಗೆ ಹೋದಾಗ ಮನೆಯಲ್ಲಿ ಗ್ಯಾಸ್ ಸಿಲಿಂಡರ್ನಿಂದ ಅನಿಲ ಭಾಗಶಃ ಸೋರಿಕೆಯಗಿತ್ತು ,ಒಳಗಿನ ಕೊಠಡಿಯನ್ನು ಪರಿಶೀಲಿಸಿದಾಗ, ಮೂರು ಶವಗಳು ಹಾಸಿಗೆಯ ಮೇಲೆ ಕಂಡುಬಂದಿದೆ ಮತ್ತು ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಊಹಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ತಿಳಿಸಿದ್ದಾರೆ.ಆತ್ಮಹತ್ಯೆ ಪತ್ರವೂ ಸಿಕ್ಕಿದೆ.
ಮಂಜು ಅವರ ಪತಿ ಕಳೆದ ವರ್ಷ ಏಪ್ರಿಲ್ನಲ್ಲಿ ಕರೋನಾದಿಂದ ಸಾವನ್ನಪ್ಪಿದ್ದರು ಮತ್ತು ಅಂದಿನಿಂದ ಕುಟುಂಬವು ಖಿನ್ನತೆಗೆ ಒಳಗಾಗಿತ್ತು ಮತ್ತು ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು ಎಂದು ಸ್ಥಳೀಯರು ಮತ್ತು ಪೊಲೀಸರು ತಿಳಿಸಿದ್ದಾರೆ.