ದೆಹಲಿ: ಸೇನಾ ಯೋಧ ನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯ ಪಹರ್ಗಂಜ್ ಪ್ರದೇಶದ ಹೋಟೆಲ್ ಕೊಠಡಿಯಲ್ಲಿ ನಡೆದಿದೆ.
ಮೃತ ಯೋಧನು 2 ದಿನಗಳ ಹಿಂದೆ ಹೋಟೆಲ್ಗೆ ತಂಗಲು ಬಂದಿದ್ದರು ಎನ್ನಲಾಗಿದೆ.ಇವರು ತಂಗಿದ್ದ ಹೋಟೆಲ್ನಲ್ಲಿ ಪತ್ರವೊಂದು ದೊರಕಿದ್ದು, ಅದರಲ್ಲಿ ʻನನ್ನ ಸಾವಿಗೆ ಯುವತಿ(ಹೆಸರಿಸಲಾಗಿಲ್ಲ)ಯೊಬ್ಬಳು ನೀಡುತ್ತಿದ್ದ ಕಿರುಕುಳವೇ ಕಾರಣʼ ಎಂದು ಬರೆಯಲಾಗಿದೆ. ಇನ್ನೂ ಆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಯೋಧನು ಆತ್ಮಹತ್ಯೆ ಮಾಡಿಕೊಳ್ಳುವ 2 ದಿನಗಳ ಮೊದಲು ಹೋಟೆಲ್ಗೆ ತಂಗಲು ಬಂದಿದ್ದರು ಎಂದು ಅಲ್ಲಿಯವರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆತ್ಮಹತ್ಯೆ ಪತ್ರದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಆತ್ಮಹತ್ಯೆಯ ಬಗ್ಗೆ ಮಾಹಿತಿ ನೀಡಿದ ನಂತರ, ಪ್ರಸ್ತುತ ಪ್ರಕರಣವನ್ನು ತನಿಖೆ ನಡೆಸುತ್ತಿದೆ.