ನವದೆಹಲಿ: ಪ್ರಸ್ತುತ ದೇಶದಲ್ಲಿ ಎದುರಾಗುತ್ತಿರುವ ಸನ್ನಿವೇಶದಲ್ಲಿ ನಮ್ಮ ಕರೊನಾ ಲಸಿಕೆಯು ನಿಷ್ಪರಿಣಾಮಕಾರಿ ಆಗುವ ಸಾಧ್ಯತೆ ಇದೆ, ಇಡೀ ಜಗತ್ತು ಲಸಿಕೀಕರಣ ಆಗಬೇಕೆಂಬುದು ಪ್ರಸ್ತುತ ಆದ್ಯತೆ ಆಗಬೇಕು. ಲಸಿಕೆಯ ಹಿಂದೆ ಯಾರು ಉಳಿಯಬಾರದು. ಅಲ್ಲದೆ, ಈ ಸಾಂಕ್ರಮಿಕವನ್ನು ನಿರ್ಮೂಲನೆ ಮಾಡಲು ವಿಜ್ಞಾನದ ಮೇಲೆ ಹೆಚ್ಚು ಬಂಡವಾಳ ಹೂಡುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ ಎಂದು ನೀತಿ ಆಯೋದ ಸದಸ್ಯ ಡಾ. ವಿ.ಕೆ. ಪೌಲ್ ಬುಧವಾರ ತಿಳಿಸಿದ್ದಾರೆ.
ರಾಷ್ಟ್ರದಲ್ಲಿ ಕರೊನಾ ರೂಪಾಂತರಿ ಒಮಿಕ್ರಾನ್ ಭೀತಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ವಿ.ಕೆ. ಪೌಲ್ ಈ ಮಾತುಗಳನ್ನಾಡಿದ್ದಾರೆ.ಇಂದು ರೂಪಾಂತರಿಗಳನ್ನು ಗುರಿಯಾಗಿರಿಸಿಕೊಂಡು ಲಸಿಕೆ ರಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಔಷಧ ಅಭಿವೃದ್ಧಿಗೆ ಹೆಚ್ಚು ಸಂಘಟಿತ ವಿಧಾನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.