ನವದೆಹಲಿ: ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಕತಾರ್ ಏರ್ವೇಸ್ನ ವಿಮಾನದ ಸರಕು ವಿಭಾಗಲ್ಲಿ ಬೆಂಕಿ ಕಾಣಿಸಿ ದಟ್ಟ ಹೊಗೆ ಆವರಿಸಿದ ಪರಿನಾಮ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.
ಕತಾರ್ ಏರ್ವೇಸ್ನ ವಿಮಾನ -579 ದೆಹಲಿಯಿಂದ ದೋಹಾಗೆ ಹೊಗುವಾಗ ಹೊಗೆಯ ಸೂಚನೆ ಬಂದಿದೆ ತಕ್ಷಣ ಪೈಲಟ್ ತುರ್ತು ಸಂದೇಶ ನೀಡಿದರು ಎನ್ನಲಾಗಿದೆ.
ನಂತರ ವಿಮಾನವನ್ನು ಕರಾಚಿಗೆ ತಿರುಗಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಮಾನವು ಕರಾಚಿಯಲ್ಲಿ ಸುರಕ್ಷಿತವಾಗಿ ಇಳಿಯಿತು, ಅಲ್ಲಿ ತುರ್ತು ಸೇವೆಗಳು ಅದನ್ನು ಪೂರೈಸಿದವು ಮತ್ತು ಪ್ರಯಾಣಿಕರು ು ಕ್ರಮಬದ್ಧವಾಗಿ ಇಳಿಸಿ ಬದಲಿ ವ್ಯವಸ್ಥೆ ಮಾಡಲಾಗಿದೆ.ಸುಮಾರು 200 ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.ಯಾವುದೇ ಅಪಾಯ ಸಂಭವಿಸಿಲ್ಲ