News Karnataka Kannada
Saturday, May 18 2024
ದೆಹಲಿ

ಐಷಾರಾಮಿ ಕಾರುಗಳನ್ನು ಕಳವುಗೈದ ಆರೋಪ: ಮೂವರು ಬಂಧನ

Photo Credit :

ನವದೆಹಲಿ: ಅತ್ಯಾಧುನಿಕ ಹ್ಯಾಕಿಂಗ್ ಸಾಧನಗಳನ್ನು ಬಳಸಿಕೊಂಡು ಐಷಾರಾಮಿ ಕಾರುಗಳನ್ನು ಕಳವುಗೈದ ಆರೋಪದ ಮೇಲೆ ಒಟ್ಟು ಮೂವರನ್ನು ಬಂಧಿಸಲಾಗಿದೆ. ಕದ್ದ ಕಾರನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕದ್ದ ಕಾರನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಉತ್ತಮ್ ನಗರ ನಿವಾಸಿಗಳಾದ ಮನೀಶ್ ರಾವ್ ಮತ್ತು ಜಗದೀಪ್ ಶರ್ಮಾ ಎಂದು ಗುರುತಿಸಲಾಗಿದೆ. ಮೂರನೇ ಆರೋಪಿಯನ್ನು ಮೀರತ್ ಮೂಲದ ಆಸ್ ಮೊಹಮ್ಮದ್ ಎಂದು ಗುರುತಿಸಲಾಗಿದ್ದು, ಪ್ರಾಥಮಿಕ ಮಾರಾಟಗಾರ ಎಂದು ಹೇಳಲಾಗಿದೆ.

ರವಿ ಉತ್ತಮ್ ನಗರ ಗ್ಯಾಂಗ್‌ಗೆ ಸೇರಿದ ಆರೋಪಿಗಳು ಕದ್ದ ಕಾರುಗಳನ್ನು ಪತ್ತೆಹಚ್ಚಲು ಸಾಧ್ಯವಾಗದಂತೆ ನೋಡಿಕೊಳ್ಳಲು ಹ್ಯಾಕಿಂಗ್ ಸಾಧನ ಮತ್ತು ಜಿಪಿಎಸ್ ಜಾಮರ್‌ಗಳ ಮೂಲಕ ಐಷಾರಾಮಿ ಕಾರುಗಳನ್ನು ಅನ್ಲಾಕ್ ಮಾಡುವ ಕೆಲಸ‌ ಮಾಡುತ್ತಾರೆ.

ನಂತರ ಅವರು ಸಾಫ್ಟ್‌ವೇರ್ ಫಾರ್ಮ್ಯಾಟ್ ಮಾಡಿ ಇನ್ನೊಂದನ್ನು ಸ್ಥಾಪಿಸಿ, ಕದ್ದ ವಾಹನಗಳಿಗೆ ಹೊಸ ಕೀಗಳನ್ನು ನಿರ್ಮಿಸುತ್ತಾರೆ. ಇದಾಗಿ, ಸಿಸಿ ಟಿವಿ ಕವರೇಜ್ ಇಲ್ಲದ ಜಾಗದಲ್ಲಿ ಈ ಕಾರುಗಳನ್ನು ನಿಲ್ಲಿಸುತ್ತಿದ್ದರು. ಈ ವಾಹನಗಳನ್ನು ಮೀರತ್ ಮತ್ತು ರಾಜಸ್ಥಾನದಲ್ಲಿ ಮಾರಾಟ ಮಾಡುವುದನ್ನು ಈ ಗ್ಯಾಂಗ್‌ ರೂಢಿ ಮಾಡಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ಹುಂಡೈ ಕ್ರೆಟಾ ಸೇರಿ ಏಳು ಕಾರುಗಳನ್ನು ಸದ್ಯ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಈ ವರ್ಷದ ಏಪ್ರಿಲ್‌ನಿಂದೀಚೆಗೆ ದೆಹಲಿ-ಎನ್‌ಸಿಆರ್‌ನ ವಿವಿಧ ಭಾಗಗಳಿಂದ 40 ಕ್ಕೂ ಹೆಚ್ಚು ಕಾರುಗಳನ್ನು ಕಳವು ಮಾಡಿದ್ದಾರೆ.

ಆರೋಪಿಗಳಿಂದ ಎರಡು ಪಿಸ್ತೂಲ್‌ಗಳು ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ, ಜೊತೆಗೆ ವಿವಿಧ ಹ್ಯಾಕಿಂಗ್ ಸಾಧನಗಳು, ಟೂಲ್‌ಕಿಟ್‌ಗಳು ಮತ್ತು ಮೂವತ್ತು ಕಾರ್ ಕೀಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೈಋತ್ಯ ದೆಹಲಿಯ ಡಿಸಿಪಿ ಮನೋಜ್ ಸಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು