ಮುಂಬೈ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಮನೆಯನ್ನು ನಿನ್ನೆ(ಜ.5) 2 ಕೋಟಿಗೆ ವಕೀಲರೊಬ್ಬರು ಖರೀದಿಸಿದ್ದಾರೆ. ಇವರು ಅಲ್ಲಿ ಸನಾತನ ಶಾಲೆ ನಿರ್ಮಿಸುವುದಾಗಿ ಹೇಳಿದ್ದಾರೆ. ಮಾಜಿ ಶಿವಸೇನಾ ನಾಯಕ ಅಜಯ್ ಶ್ರೀವಾಸ್ತವ ಅವರು ಪ್ಲಾಟ್ಗಾಗಿ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಿದ್ದಾರೆ.
ನಾನು ಸನಾತನ ಹಿಂದೂ ಮತ್ತು ನಾವು ನಮ್ಮ ಪಂಡಿತ್ಜೀ ಅವರನ್ನು ಅನುಸರಿಸುತ್ತೇವೆ. ಸರ್ವೆ ನಂಬರ್ (ಪ್ಲಾಟ್ನ) ಮತ್ತು ಮೊತ್ತವು ಸಂಖ್ಯಾಶಾಸ್ತ್ರದ ಪ್ರಕಾರ ನನ್ನ ಪರವಾಗಿ ಹೋಗುವ ಅಂಕಿ ಅಂಶವನ್ನು ಹೊಂದಿದೆ. ಅದನ್ನು ಪರಿವರ್ತಿಸಿದ ನಂತರ ನಾನು ಈ ಪ್ಲಾಟ್ನಲ್ಲಿ ಸನಾತನ ಶಾಲೆಯನ್ನು ಪ್ರಾರಂಭಿಸುತ್ತೇನೆ ಎಂದು ಹೇಳಿರುವ ವಾಸ್ತವ ಅವರು ಈ ಹಿಂದೆ ಅದೇ ಗ್ರಾಮದಲ್ಲಿ ಅವರ ಬಾಲ್ಯದ ಮನೆ ಸೇರಿದಂತೆ ಭೂಗತ ಪಾತಕಿಯ ಮೂರು ಆಸ್ತಿಗಳನ್ನು ಖರೀದಿಸಿದ್ದಾರೆ.