ಮುಂಬೈ: ಜೈಪುರದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಇಂದು (ಜುಲೈ 31) ಬೆಳಗಿನ ಜಾವ 5 ಗಂಟೆಗೆ ರೈಲ್ವೆ ರಕ್ಷಣಾ ಪಡೆಯ ಪೇದೆಯು ತನ್ನ ಹಿರಿಯ ಅಧಿಕಾರಿ, ಎಎಸ್ಐ ಟೀಕಾ ಶರ್ಮಾ ಎಂಬುವರು ಸೇರಿ ನಾಲ್ವರ ಮೇಲೆ ಗುಂಡಿನ ದಾಳಿ ನಡೆಸಿರುವುದಕ್ಕೆ ಹೊಸ ತಿರುವು ಸಿಕ್ಕಿದೆ.
ಇತ್ತೀಚೆಗೆ ಆರ್ಪಿಎಫ್ ಪೇದೆ ಚೇತನ್ ಸಿಂಗ್ ನ ನ್ನು ಗುಜರಾತ್ನಿಂದ ಮುಂಬೈಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಕುಪಿತಗೊಂಡು ಎಎಸ್ಐ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಪೇದೆ ಚೇತನ್ ಸಿಂಗ್ನನ್ನು ಗುಜರಾತ್ನಿಂದ ಮುಂಬೈಗೆ ವರ್ಗಾವಣೆ ಮಾಡಲಾಗಿತ್ತು. ಕೌಟುಂಬಿಕ ಸಮಸ್ಯೆಗಳೂ ಇದ್ದ ಕಾರಣ ಚೇತನ್ ಸಿಂಗ್, ಗುಜರಾತ್ನಿಂದ ಮುಂಬೈಗೆ ತೆರಳಲು ಇಷ್ಟವಿರಲಿಲ್ಲ. ಇದರಿಂದ ಆತನ ಮಾನಸಿಕವಾಗಿ ನೊಂದಿದ್ದ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಹಿರಿಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದ. ಆದರೂ, ಆತ ಗುಜರಾತ್ಗೆ ತೆರಳಲೇಬೇಕಿತ್ತು. ಇದು ಆತನ ಮಾನಸಿಕ ಸ್ಥಿಮಿತವನ್ನು ಕದಡಿತ್ತು.
ಇದೇ ಕಾರಣಕ್ಕೆ ಇಂದು ಬೆಳಗ್ಗೆ ತನ್ನ ಡ್ಯೂಟಿ-ಇನ್ಚಾರ್ಜ್ ಎಎಸ್ಐ ಟಿಕಾ ರಾಮ್ ಮೀನಾ ಮೇಲೆ ಫೈರಿಂಗ್ ಮಾಡಿದ್ದಾನೆ. ಆತನನ್ನು ಗುಂಡಿಟ್ಟು ಹತ್ಯೆಗೈಯುತ್ತಿದ್ದಂತೆ ಮತ್ತೊಂದು ಬೋಗಿಗೆ ಹೋಗಿದ್ದಾನೆ. ಅಲ್ಲಿ ಮೂವರು ಪ್ಯಾಸೆಂಜರ್ ಮೇಲೆ ಫೈರಿಂಗ್ ಮಾಡಿ ಕಗ್ಗೊಲೆ ಮಾಡಿದ್ದಾನೆ. ಸದ್ಯ 30 ವರ್ಷದ ಆರ್ಪಿಎಫ್ ಪೇದೆಯನ್ನು ನಾವು ವಶಕ್ಕೆ ಪಡೆದಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.