News Karnataka Kannada
Sunday, May 12 2024
ದೇಶ

ರೈಲಿನಲ್ಲಿ ಗುಂಡಿಟ್ಟು ನಾಲ್ವರನ್ನು ಕೊಂದ ಕಾನ್​​ಸ್ಟೇಬಲ್: ಈತನ ಕೋಪಕ್ಕೆ ಕಾರಣ ಏನು ಗೊತ್ತಾ?

Constable shot
Photo Credit : News Kannada

ಮುಂಬೈ: ಜೈಪುರದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಇಂದು (ಜುಲೈ 31) ಬೆಳಗಿನ ಜಾವ 5 ಗಂಟೆಗೆ ರೈಲ್ವೆ ರಕ್ಷಣಾ ಪಡೆಯ ಪೇದೆಯು ತನ್ನ ಹಿರಿಯ ಅಧಿಕಾರಿ, ಎಎಸ್‌ಐ ಟೀಕಾ ಶರ್ಮಾ ಎಂಬುವರು ಸೇರಿ ನಾಲ್ವರ ಮೇಲೆ ಗುಂಡಿನ ದಾಳಿ ನಡೆಸಿರುವುದಕ್ಕೆ ಹೊಸ ತಿರುವು ಸಿಕ್ಕಿದೆ.

ಇತ್ತೀಚೆಗೆ ಆರ್‌ಪಿಎಫ್‌ ಪೇದೆ ಚೇತನ್ ಸಿಂಗ್ ನ ನ್ನು ಗುಜರಾತ್‌ನಿಂದ ಮುಂಬೈಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಕುಪಿತಗೊಂಡು ಎಎಸ್‌ಐ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ ಪೇದೆ ಚೇತನ್‌ ಸಿಂಗ್‌ನನ್ನು ಗುಜರಾತ್‌ನಿಂದ ಮುಂಬೈಗೆ ವರ್ಗಾವಣೆ ಮಾಡಲಾಗಿತ್ತು. ಕೌಟುಂಬಿಕ ಸಮಸ್ಯೆಗಳೂ ಇದ್ದ ಕಾರಣ ಚೇತನ್‌ ಸಿಂಗ್‌, ಗುಜರಾತ್‌ನಿಂದ ಮುಂಬೈಗೆ ತೆರಳಲು ಇಷ್ಟವಿರಲಿಲ್ಲ. ಇದರಿಂದ ಆತನ ಮಾನಸಿಕವಾಗಿ ನೊಂದಿದ್ದ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಹಿರಿಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದ. ಆದರೂ, ಆತ ಗುಜರಾತ್‌ಗೆ ತೆರಳಲೇಬೇಕಿತ್ತು. ಇದು ಆತನ ಮಾನಸಿಕ ಸ್ಥಿಮಿತವನ್ನು ಕದಡಿತ್ತು.

ಇದೇ ಕಾರಣಕ್ಕೆ ಇಂದು ಬೆಳಗ್ಗೆ ತನ್ನ ಡ್ಯೂಟಿ-ಇನ್​ಚಾರ್ಜ್ ಎಎಸ್​ಐ ಟಿಕಾ ರಾಮ್ ಮೀನಾ ಮೇಲೆ ಫೈರಿಂಗ್ ಮಾಡಿದ್ದಾನೆ. ಆತನನ್ನು ಗುಂಡಿಟ್ಟು ಹತ್ಯೆಗೈಯುತ್ತಿದ್ದಂತೆ ಮತ್ತೊಂದು ಬೋಗಿಗೆ ಹೋಗಿದ್ದಾನೆ. ಅಲ್ಲಿ ಮೂವರು ಪ್ಯಾಸೆಂಜರ್ ಮೇಲೆ ಫೈರಿಂಗ್ ಮಾಡಿ ಕಗ್ಗೊಲೆ ಮಾಡಿದ್ದಾನೆ. ಸದ್ಯ 30 ವರ್ಷದ ಆರ್​​ಪಿಎಫ್ ಪೇದೆಯನ್ನು ನಾವು ವಶಕ್ಕೆ ಪಡೆದಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು