ಛತ್ತೀಸ್ಗಢ: ಅಯೋಧ್ಯೆಯಲ್ಲಿ ರಾಮ ವಿಗ್ರಹ ಪ್ರಾಣ ಪ್ರತಿಷ್ಠಾ ಜ. 22 ರಂದು ನಡೆಯಲಿದೆ. ಹಲವಾರು ಗಣ್ಯರಿಗೆ ಆಹ್ವಾನ ನೀಡಲಾಗಿದೆ.
700 ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ 35 ವರ್ಷದ ಮಹಿಳಾ ಶವಪರೀಕ್ಷೆ ಸಹಾಯಕಿ ಸಂತೋಷಿ ದುರ್ಗಾ ಅವರಿಗೆ ರಾಮಲಲ್ಲಾ ಅವರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕಾಗಿ ರಾಮಮಂದಿರ ಟ್ರಸ್ಟ್ನಿಂದ ಆಹ್ವಾನ ನೀಡಿದೆ.
ಇಂತಹ ಭಾಗ್ಯ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ತನಗೆ ಆಮಂತ್ರಣ ಕಳುಹಿಸಿದ್ದು ರಾಮನೇ ಎಂದು ಭಾವುಕಳಾದಳು. ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಎಂದು ಸಂತೋಷಿ ದುರ್ಗಾ ಹೇಳಿದರು.
ಛತ್ತೀಸ್ಗಢದ ನರಹರಪುರದ ಸಂತೋಷಿ ದುರ್ಗಾ (35) ಸುಮಾರು 18 ವರ್ಷಗಳಿಂದ ನರಹರಪುರ ಪ್ರಾಥಮಿಕ ಆರೋಗ್ಯದಲ್ಲಿ ಜೀವನ್ ದೀಪ್ ಸಮಿತಿಯ ನೈರ್ಮಲ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಇಲ್ಲಿಯವರೆಗೆ 700 ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ್ದಾರೆ.