ಭೋಪಾಲ್; ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಶೇ.40 ಕಮಿಷನ್ ಪಡೆಯುತ್ತ ಅಧಿಕಾರ ಚಲಾಯಿಸಿತು. ಆ ಹಣವನ್ನು ಜನತೆಗೇ ವಿವಿಧ ಜನಕಲ್ಯಾಣ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಮರಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ(ನ.15) ಹೇಳಿದರು.
ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಿಮಿತ್ತ ಮಧ್ಯಪ್ರದೇಶದ ವಿದಿದಾದಲ್ಲಿ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತನಾಡಿದ ಅವರು, ಜನರಿಂದ ಲೂಟಿ ಹೊಡೆದ ಆ ದುಡ್ಡನ್ನು ಜನರಿಗೇ ಮರಳಿಸುವಂತೆ ಕರ್ನಾಟಕ ಮುಖ್ಯಮಂತ್ರಿಗೆ ಸೂಚಿಸಿದ್ದೇನೆ. ಇದೇ ಹಣವನ್ನು ಬಿಜೆಪಿ ಶ್ರೀಮಂತರ ಜೇಬಿಗೆ ಹಾಕಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಉಚಿತ ಬಸ್ ಸಂಚಾರ ವ್ಯವಸ್ಥೆಯನ್ನು ಮಹಿಳೆಯರಿಗೆ ನೀಡಲಾಗಿದೆ. ಇನ್ನೂ ಅನೇಕ ಯೋಜನೆಗಳನ್ನು ಅಲ್ಲಿ ಜಾರಿಗೆ ತರಲಾಗಿದೆ.