ಹುಬ್ಬಳ್ಳಿ: ಹಿಂದಿಯ ಖ್ಯಾತ ಹಿನ್ನೆಲೆ ಗಾಯಕ ಜುಬಿನ್ ನೌಟಿಯಾಲ್ ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ‘ಗಾಳಿಪಟ ಉತ್ಸವ’ದ ನಿಮಿತ್ತವಾಗಿ ಗಾಯನ ಕಾರ್ಯಕ್ರಮಕ್ಕೆ ಕಳೆದ ಎರಡು ದಿನಗಳಿಂದ ಜುಬಿನ್ ನೌಟಿಯಾಲ್ ಮತ್ತು ಅವರ ತಂಡ ಹುಬ್ಬಳ್ಳಿಯಲ್ಲಿದ್ದಾರೆ.
ಕಾರ್ಯಕ್ರಮದ ಬಳಿಕ ಹುಬ್ಬಳ್ಳಿ ಧಾರವಾಡ ನಗರಗಳ ರೌಂಡ್ ಹಾಕಿದ ನೌಟಿಯಾಲ್, ಅಮರಗೋಳದ ಚಂದ್ರಮೌಳೇಶ್ವರ ದೇವಸ್ಥಾನ ಮತ್ತು ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿ ಗದ್ದುಗೆ ವಿಶೇಷ ಪೂಜೆ ಸಹ ಸಲ್ಲಿಸಿದರು.
ಮಠದ ಆಡಳಿತ ಮಂಡಳಿಯ ವತಿಯಿಂದ ಜುಬಿನ್ ನೌಟಿಯಾಲ್ ಅವರಿಗೆ ಸನ್ಮಾನಿಸಲಾಗಿದೆ.