ಪಾಟ್ನಾ: ದೋಸೆಯೊಂದಿಗೆ ಸಾಂಬಾರ್ ನೀಡದ ರೆಸ್ಟೋರೆಂಟ್ವೊಂದಕ್ಕೆ ಬಿಹಾರದ ಬಕ್ಸರ್ ಜಿಲ್ಲೆಯ ಗ್ರಾಹಕ ಆಯೋಗವು 3,500 ರೂಪಾಯಿ ದಂಡ ವಿಧಿಸಿದೆ. 2022ರಲ್ಲಿ ನಡೆದ ಘಟನೆ ನಡೆದಿದ್ದು, ಆಯೋಗ 11 ತಿಂಗಳ ಕಾಲ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.
ಆಗಸ್ಟ್ 15ರಂದು ಬಾಂಗ್ಲಾ ಘಾಟ್ ನಿವಾಸಿ, ವಕೀಲ ನಿವಾಸಿ ಮನೀಶ್ ಪಾಠಕ್, ಜನ್ಮದಿನವಾಗಿದ್ದು ಅಂದು ಅವರು ಗೋಲಾ ಮಾರ್ಕೆಟ್ನಲ್ಲಿರುವ ರೆಸ್ಟೊರೆಂಟ್ನಲ್ಲಿ ಸ್ಪೆಷಲ್ ಮಸಾಲೆ ದೋಸೆ ಪಾರ್ಸೆಲ್ ಮಾಡುವಂತೆ ತಿಳಿಸಿದ್ದರು. ಬಳಿಕ ‘140 ರೂ. ಪಾವತಿಸಿ ಮನೆಗೆ ವಾಪಸ್ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದರು. ಆದರೆ ಪಾರ್ಸೆಲ್ ತೆರೆದಾಗ ಸಾಂಬಾರ್ ಕಾಣಲಿಲ್ಲ. ದೋಸೆ ಮತ್ತು ಸಾಸ್ ಮಾತ್ರ ಇತ್ತು. ದೋಸೆ ತಿನ್ನುವಾಗ ಸಾಂಬಾರ್ ಮುಖ್ಯವಾಗಿದ್ದು, ರಾತ್ರಿಯ ಸಮಯವಾದ್ದರಿಂದ ಮರುದಿನ ನಾನು ರೆಸ್ಟೋರೆಂಟ್ಗೆ ಹೋಗಿ ಮಾಲೀಕರಿಗೆ ದೂರು ನೀಡಿದೆ.
ಅವರು ಸರಿಯಾದ ಪ್ರತಿಕ್ರಿಯೆ ನೀಡದೆ ಕೇವಲ 140 ರೂ.ನಲ್ಲಿ ಸಂಪೂರ್ಣ ರೆಸ್ಟೋರೆಂಟ್ ಖರೀದಿಸಲು ಸಾಧ್ಯವಿಲ್ಲ ಎಂದು ಉಡಾಫೆಯಾಗಿ ಮಾತನಾಡಿದ್ದರು. ಇದು ಗ್ರಾಹಕರ ನಂಬಿಕೆಗೆ ವಂಚನೆಯಾದ ಕಾರಣ ಗ್ರಾಹಕ ಆಯೋಗದಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದೆ. ಗ್ರಾಹಕ ಆಯೋಗದ “ಅಧ್ಯಕ್ಷ ವೇದ್ ಪ್ರಕಾಶ್ ಸಿಂಗ್ ಮತ್ತು ಸದಸ್ಯ ವರುಣ್ ಕುಮಾರ್ ಅವರ ದ್ವಿಪೀಠದ ವಿಚಾರಣೆಯ ಸಂದರ್ಭದಲ್ಲಿ, ರೆಸ್ಟೋರೆಂಟ್ ಸೇವೆಯಲ್ಲಿ ತಪ್ಪಾಗಿರುವುದನ್ನು ಮನಗಂಡಿತು. ಅಲ್ಲದೆ ಪ್ರಕರಣದ ವೇಳೆ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಪರಿಹಾರವಾಗಿ 2000 ರೂ. ಗಳನ್ನು ಪಾವತಿಸುವಂತೆ ಹೋಟೆಲ್ಗೆ ಆಯೋಗ ತೀರ್ಪು ನೀಡಿದೆ. ನ್ಯಾಯಾಲಯದ ಖರ್ಚು 1500 ರೂ. ನೀಡುವಂತೆ ಹೋಟೆಲ್ ಮಾಲೀಕರಿಗೆ ಆದೇಶ ನೀಡಿದೆ ಎಂದು ವಕೀಲರು ವಿವರಿಸಿದ್ದಾರೆ.