News Karnataka Kannada
Thursday, May 02 2024
ಮಹಾರಾಷ್ಟ್ರ

ಟ್ರಾಫಿಕ್‌ನಲ್ಲಿ ತೃತೀಯ ಲಿಂಗಿಗಳ ಭಿಕ್ಷಾಟಣೆಗೆ ನಿಷೇಧ

ಮಂಗಳಮುಖಿಯರು ಬಸ್‌ಗಳಲ್ಲಿ , ರೈಲ್‌ನೊಳಗೆ ಬಂದು ಜನರ ಹಣ ಕೇಳುತ್ತಾರೆ ಕೆಲವರು ಕೊಟ್ಟಷ್ಟಕ್ಕೆ ತೃಪ್ತಿ ಪಡೆದರೆ ಇನ್ನು ಕೆಲವರು ವಿಚಿತ್ರವಾಗಿ ಇನ್ನು ಹೆಚ್ಚು ನೀಡುವಂತೆ ಕೇಳುತ್ತಾರೆ ಇನ್ನು ಕೆ;ವರು ಹಣ ಅವರು ಕೇಳಿದಷ್ಟು ಕೊಡದಿದ್ದರೆ ಶಾಪ ಹಾಕುತ್ತಾರೆ. ಅಲ್ಲದೇ ಟ್ರಾಫಿಕ್‌ನಲ್ಲಿ ಬಂದು ಭಿಕ್ಷೆ ಬೇಡಿ ಕೊಡದಿದ್ದರೆ ಕೆಟ್ಟದಾಗಿ ನಿಂಧಿಸುತ್ತಾರೆ ಹೀಗಾಗಿ ಇದನ್ನು ಗಂಭೀರವಾಗಿ ವಿಚಾರಣೆ ನಡೆಸಿದ ಪುಣೆ ಪೊಲೀಸರು ತೃತೀಯ ಲಿಂಗಿಗಳು ಭಿಕ್ಷೆ ಬೇಡುವುದನ್ನು ನಿಷೇಧಿಸಿದ್ದಾರೆ.
Photo Credit : NewsKarnataka

ಪುಣೆ : ಮಂಗಳಮುಖಿಯರು ಬಸ್‌ಗಳಲ್ಲಿ , ರೈಲ್‌ನೊಳಗೆ ಬಂದು ಜನರ ಹಣ ಕೇಳುತ್ತಾರೆ ಕೆಲವರು ಕೊಟ್ಟಷ್ಟಕ್ಕೆ ತೃಪ್ತಿ ಪಡೆದರೆ ಇನ್ನು ಕೆಲವರು ವಿಚಿತ್ರವಾಗಿ ಇನ್ನು ಹೆಚ್ಚು ನೀಡುವಂತೆ ಕೇಳುತ್ತಾರೆ ಇನ್ನು ಕೆಲವರು, ಹಣ ಅವರು ಕೇಳಿದಷ್ಟು ಕೊಡದಿದ್ದರೆ ಶಾಪ ಹಾಕುತ್ತಾರೆ. ಅಲ್ಲದೇ ಟ್ರಾಫಿಕ್‌ನಲ್ಲಿ ಬಂದು ಭಿಕ್ಷೆ ಬೇಡಿ ಕೊಡದಿದ್ದರೆ ಕೆಟ್ಟದಾಗಿ ನಿಂಧಿಸುತ್ತಾರೆ ಹೀಗಾಗಿ ಇದನ್ನು ಗಂಭೀರವಾಗಿ ವಿಚಾರಣೆ ನಡೆಸಿದ ಪುಣೆ ಪೊಲೀಸರು ತೃತೀಯ ಲಿಂಗಿಗಳು ಭಿಕ್ಷೆ ಬೇಡುವುದನ್ನು ನಿಷೇಧಿಸಿದ್ದಾರೆ.

ಪ್ರಯಾಣಿಕರಿಂದ ಬಲವಂತವಾಗಿ ಹಣಕ್ಕಾಗಿ ಒತ್ತಾಯಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿಯಲ್ಲಿ ಪೊಲೀಸರು ಇದುವರೆಗೂ ಸ್ವೀಕರಿಸಿರುವ ದೂರುಗಳಿಗೆ ಪ್ರತಿಕ್ರಿಯೆಯಾಗಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅಮಿತೇಶ್‌ ಕುಮಾರ್‌ ಹೇಳಿದ್ದಾರೆ.

ಅಲ್ಲದೇ ಮಂಗಳಮುಖಿಯರು ಹಬ್ಬಗಳು, ಜನನ ಮತ್ತು ಸಾವಿನ ಸಮಯದಲ್ಲಿ ಮನೆ ಮತ್ತು ಸಂಸ್ಥೆಗಳಿಗೆ ಭೇಟಿ ನೀಡುವುದನ್ನು ಈ ಆದೇಶ ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಈ ಆದೇಶವನ್ನು ಉಲ್ಲಘಿಸಿದ್ದಲ್ಲಿ ದಂಡ ಸಂಹಿತೆ ಸೆಕ್ಷನ್‌ 188, 143, 144, 159, 268, 384, 503, 504, 506, ಮತ್ತು ಮಹಾರಾಷ್ಟ್ರ ಪೊಲೀಸ್‌ ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಅಮಿತೇಶ್‌ ಕುಮಾರ್‌ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು