ಗುವಾಹಟಿ: ಕೇಂದ್ರ ಸಚಿವ ರಾಮೇಶ್ವರ್ ತೇಲಿ ಸಹಿತ ಹಲವು ಶಾಸಕರೊಂದಿಗೆ ದಿಬ್ರುಗಢಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಗುವಾಹಟಿಯ ಬೋರ್ಜಾರ್ನಲ್ಲಿರುವ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಇಂಟರ್ನ್ಯಾಶನಲ್ (ಎಲ್ಜಿಬಿಐ) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ರಾಮೇಶ್ವರ್ ತೇಲಿ, ದುಲಿಯಾಜನ್ನ ಶಾಸಕ ತೆರಾಶ್ ಗೊವಾಲ್ಲಾ ಮತ್ತು ದಿಬ್ರುಗಢದ ಶಾಸಕ ಪ್ರಶಾಂತ ಫುಕಾನ್ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ತಾಂತ್ರಿಕ ಸಮಸ್ಯೆಯಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಮೂಲಗಳ ಪ್ರಕಾರ, ತಾಂತ್ರಿಕ ವಿಭಾಗದ ತಂಡವು ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡುತ್ತಿದೆ.
ತಾಂತ್ರಿಕ ಸಮಸ್ಯೆಯಿಂದ ಇಂಡಿಗೋ ಫ್ಲೈಟ್ 6E2652 ಜಿಎನ್ಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಶಾಸಕ ಗೋವಲ್ಲ ಹೇಳಿದ್ದಾರೆ.