News Karnataka Kannada
Saturday, May 04 2024
ಆಂಧ್ರಪ್ರದೇಶ

ಬಡವರಿಗಾಗಿ ಮಿಡಿದಿದ್ದ ಶಂಕರ ನೇತ್ರಾಲಯ ಸಂಸ್ಥಾಪಕ ಡಾ.ಬದರಿನಾಥ್ ಇನ್ನಿಲ್ಲ

 Founder Of Chennais Sankara
Photo Credit :

ಚೆನ್ನೈ: ಶಂಕರ ನೇತ್ರಾಲಯದ ಸಂಸ್ಥಾಪಕ, ಪದ್ಮವಿಭೂಷಣ ಪುರಸ್ಕೃತ ಡಾ.ಎಸ್.ಎಸ್.ಬದರಿನಾಥ್ ಇಂದು ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು, ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಡಾ.ಎಸ್.ಎಸ್.ಬದರಿನಾಥ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ಕಂಬನಿ ಮಿಡಿದಿದ್ದಾರೆ.

ದೇಶದಲ್ಲಿಯೇ ಅತೀ ದೊಡ್ಡ ಚಾರಿಟೇಬಲ್ ಹಾಸ್ಪಿಟಲ್ಸ್ ‘ಶಂಕರ್ ನೇತ್ರಾಲಯ’ವನ್ನು ಚೆನ್ನೈನಲ್ಲಿ ಹುಟ್ಟು ಹಾಕಿದ ಹೆಗ್ಗಳಿಕೆ ಡಾ.ಎಸ್​.ಎಸ್.ಬದರಿನಾಥ್​ ಅವರದ್ದಾಗಿತ್ತು. ಡಾ.ಬದರಿನಾಥ್ ವಿದೇಶದಲ್ಲಿ ವಿದ್ಯಾಭ್ಯಾಸ ಮತ್ತು ಸಂಶೋಧನೆಗಳನ್ನು ಪೂರ್ಣಗೊಳಿಸಿದ ನಂತರ ಭಾರತಕ್ಕೆ ಬಂದು 1978ರಲ್ಲಿ ಲಾಭ ರಹಿತ ಜನಸೇವೆಯಲ ಚಾರಿಟೇಬಲ್ ಹುಟ್ಟು ಹಾಕಿದ್ದರು.

ಡಾ.ಬದರೀನಾಥ್ ಸೇವೆಯನ್ನು ಮೆಚ್ಚಿದ ಭಾರತ ಸರ್ಕಾರ 1983ರಲ್ಲಿ ಪದ್ಮಶ್ರೀ ಮತ್ತು 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿತ್ತು. ತಮಿಳುನಾಡು ಡಾ.ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲಯವು 1995 ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತ್ತು. ಡಾ.ಬದರಿನಾಥ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು