ಆಂಧ್ರಪ್ರದೇಶ: ತಿಂಗಳ ಹಿಂದೆ ತನ್ನನ್ನು ತೊರೆದು ಹೋದ ಪತ್ನಿಯನ್ನು ಹುಡುಕಿಕೊಂಡು ಪತಿ ಅತ್ತೆಯ ಮನೆಗೆ ಬಂದಿದ್ದಾನೆ. ಈ ವೇಳೆ ಅಲ್ಲಿ ಪತ್ನಿ ಕಾಣದ ಕಾರಣ ಅತ್ತೆಯೊಂದಿಗೆ ಜಗಳವಾಡಿದ್ದಾನೆ. ಜಗಳವು ತಾರಕಕ್ಕೇರಿದ ಪರಿಣಾಮ ಕೋಪಗೊಂಡು ಅತ್ತೆಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಆಂಧ್ರದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.
ರಮೇಶ್ ಮತ್ತು ದಿವ್ಯಾ ಕೆಲ ತಿಂಗಳ ಹಿಂದೆ ಮದುವೆಯಾಗಿದ್ದರು. ದಿನಗಳು ಕಳೆದಂತೆ ರಮೇಶ್ ತನ್ನ ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನಂತೆ. ಇದರಿಂದ ಬೇಸತ್ತು ದಿವ್ಯಾ ತನ್ನ ತಾಯಿ ಮನೆಗೆ ಬಂದಿದ್ದಾಳೆ. ಎಷ್ಟು ದಿನವಾದ್ರೂ ಪತ್ನಿ ಮನೆಗೆ ಬರದ ಕಾರಣ ಆಕೆಯ ಮನೆಗೆ ರಮೇಶ್ ಹೋಗಿದ್ದಾನೆ.
ದಿವ್ಯಾ ವ್ಯಾಸಂಗಕ್ಕೆಂದು ಹೈದರಾಬಾದ್ಗೆ ತೆರಳಿದ್ದಳು. ಈ ವೇಳೆ ಮನೆಯಲ್ಲಿ ಆಕೆ ಇರಲಿಲ್ಲ. ಈ ಕಾರಣದಿಂದಾಗಿ ಅತ್ತೆಯೊಂದಿಗೆ ಜಗಳವಾಡಿ ಆಕೆಗೆ ಚಾಕುವಿನಿಂದ ಇರಿದಿದ್ದಾನೆ.
ಮೃತ ಮಹಿಳೆಯನ್ನು ವೆಂಕಟರಮಣಮ್ಮ ಎಂದು ಗುರುತಿಸಲಾಗಿದೆ. ಘಟನೆ ನಂತರ ಆರೋಪಿ ಪರಾರಿಯಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ಆತನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಇನ್ನೂ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.