News Karnataka Kannada
Thursday, May 09 2024
ಆಂಧ್ರಪ್ರದೇಶ

ಕುಡಿದ ಮತ್ತಿನಲ್ಲಿ ಮೇಕೆ ಬದಲು ವ್ಯಕ್ತಿಯ ಕತ್ತನ್ನೇ ಕಡಿದ ಕುಡುಕ

ಉತ್ತರಪ್ರದೇಶದ ಕಾಸ್‌ಗಂಜ್‌ನಲ್ಲಿ ಟ್ರ್ಯಾಕ್ಟರ್ ಟ್ರಾಲಿ ಕೊಳಕ್ಕೆ ಬಿದ್ದು  15 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ನಡೆದಿದೆ.
Photo Credit : IANS

ಪ್ರಾಣಿಬಲಿ ನೀಡುವ ವೇಳೆ ವ್ಯಕ್ತಿಯೊಬ್ಬನನ್ನ ಆಕಸ್ಮಿಕವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಲಸಪಲ್ಲಿ ಗ್ರಾಮದಲ್ಲಿ ನಡೆದಿದೆ‌. ಜನವರಿ 16 ರ ಭಾನುವಾರದಂದು, ಮಕರ ಸಂಕ್ರಾತಿ ಆಚರಣೆ ವೇಳೆ ಈ ಘಟನೆ ನಡೆದಿದೆ.

ಆರೋಪಿ ಚಲಪತಿ ಪ್ರಾಣಿ ಬಲಿ ನೀಡುವ ಸಲುವಾಗಿ ಮೇಕೆಯ ತಲೆಯನ್ನು ಕಡಿಯಬೇಕಿತ್ತು. ಆದರೆ ಕುಡಿತದ ಅಮಲಿನಲ್ಲೆ ಹಬ್ಬಕ್ಕೆ ಬಂದಿದ್ದ ಚಲಪತಿ, ಬಲಿ ಕೊಡುವ ವೇಳೆ, ಪ್ರಾಣಿಯನ್ನ ಹಿಡಿದುಕೊಂಡಿದ್ದವನ ಕತ್ತನ್ನೆ ಕಡಿದಿದ್ದಾನೆ. ಮೃತ ದುರ್ದೈವಿಯನ್ನ ಸುರೇಶ್ ಎಂದು ಗುರುತಿಸಲಾಗಿದೆ.

ಆಂಧ್ರಪ್ರದೇಶದ ಆರಾಧ್ಯ ದೇವತೆ ಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ಪ್ರಾಣಿ ಬಲಿ ಕೊಡಲು ಆಯೋಜಿಸಲಾಗಿತ್ತು. ಮಕರ ಸಂಕ್ರಾಂತಿಯ ಹೊಸತೊಡಕು ಸಂಭ್ರಮದಲ್ಲಿದ್ದ ಸ್ಥಳೀಯರೆಲ್ಲರು ದೇವಸ್ಥಾನಕ್ಕೆ ಬಂದು ಮೇಕೆ, ಕುರಿಗಳನ್ನ ಬಲಿ ಕೊಡುತ್ತಿದ್ದರು.

ಅದೇ ಹಬ್ಬದ ಸಂಭ್ರಮದಲ್ಲಿದ್ದ ಸುರೇಶ್ ಸಹ ಬಲಿ ಕೊಡುವ ಜಾಗಕ್ಕೆ ಬಂದು, ಮೇಕೆಯ ಬದಲು ತಾವೇ ಬಲಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸುರೇಶ್ ಅವರನ್ನು ಕೂಡಲೇ ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಚಲಪತಿಯನ್ನ ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು