ಇಂದು ಭಾರತದ ಪೂರ್ವ ಕರಾವಳಿಯಲ್ಲಿ ಗುಲಾಬ್ ಚಂಡಮಾರುತ ಅಪ್ಪಳಿಸಲಿದ್ದು, ಇದು ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆ. ಈ ನಿಟ್ಟಿನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಎನ್ ಡಿ ಆರ್ ಎಫ್ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.
ಉತ್ತರ ಆಂಧ್ರ ಪ್ರದೇಶ ಮತ್ತು ಪಕ್ಕದ ದಕ್ಷಿಣ ಒಡಿಶಾ ಕರಾವಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಭಾರತ ಹವಾಮಾನ ಇಲಾಖೆ ಹೇಳಿದೆ. ಆಂಧ್ರಪ್ರದೇಶದಲ್ಲಿ 5 ತಂಡ, ಒಡಿಶಾದಲ್ಲಿ 13 ತಂಡಗಳನ್ನು ನಿಯೋಜಿಸಲಾಗಿದೆ. ಗಂಜಮ್ ಪ್ರದೇಶ ಚಂಡಮಾರುತದಿಂದ ತೀವ್ರ ಪರಿಣಾಮಕ್ಕೀಡಾಗುವ ನಿರೀಕ್ಷೆಯಿದ್ದು, ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF) ನ 42 ತಂಡಗಳು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (NDRF) ನ 24 ತಂಡಗಳು, ಸುಮಾರು 102 ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಏಳು ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಗಜಪತಿ, ಗಂಜಮ್, ರಾಯಗಡ, ಕೊರಪುಟ್, ಮಲ್ಕನಗಿರಿ, ನಬರಂಗಪುರ್ ಮತ್ತು ಕಂದಮಾಲ್ ಜಿಲ್ಲೆಗಳಿಗೆ ತಂಡ ರಚಿಸಲಾಗಿದೆ ಎಂದು ವಿಶೇಷ ಪರಿಹಾರ ಆಯುಕ್ತ ಪಿಕೆ ಜೆನಾ ಹೇಳಿದರು.
ಮಲ್ಕನಗಿರಿ, ನೌರಂಗ್ಪುರ, ಕೋರಾಪುಟ್, ಪುರಿ, ಕಲಹಂಡಿ ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಭಾರೀ ಮಳೆಯಾಗಲಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ, ವಿಜಯನಗರಂ ಮತ್ತು ಶ್ರೀಕಾಕುಳಂ ಜಿಲ್ಲೆಗಳಲ್ಲಿನ ಅಧಿಕಾರಿಗಳು ಸುಮಾರು 86,000 ಕುಟುಂಬಗಳನ್ನು ತಗ್ಗು ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತಿಸಲಾಗಿದೆ.
ಎನ್ಡಿಆರ್ಎಫ್ನ ಎರಡು ತಂಡಗಳನ್ನು ಶ್ರೀಕಾಕುಳಂ ಜಿಲ್ಲೆಯಲ್ಲಿ ನಿಯೋಜಿಸಲಾಗಿದ್ದು, ಇದು ಚಂಡಮಾರುತದ ಹೆಚ್ಚಿನ ಪರಿಣಾಮ ಬೀರುವ ನಿರೀಕ್ಷೆಯಿದೆ. ಮತ್ತೊಂದು ತಂಡವನ್ನು ವಿಶಾಖಪಟ್ಟಣಂನಲ್ಲಿ ನಿಯೋಜಿಸಲಾಗಿದೆ.