News Karnataka Kannada
Wednesday, May 01 2024
ಆಂಧ್ರಪ್ರದೇಶ

ಪತಿ ಹತ್ಯೆಗೈದು ರುಂಡದ ಜೊತೆಗೆ ಪೊಲೀಸ್ ಠಾಣೆಗೆ ಶರಣಾದ ಮಹಿಳೆ

Crime
Photo Credit : G Mohan

ರಾಣಿಗುಂಟ : ಪತಿಯನ್ನು ಹತ್ಯೆಗೈದ 50 ವರ್ಷದ ಮಹಿಳೆ ರುಂಡವನ್ನು ಪೊಲೀಸ್ ಠಾಣೆಗೆ ತಂದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.

ತಿರುಪತಿ ಜಿಲ್ಲೆಯ ರಾಣಿಗುಂಟ ಎಂಬ ಸಣ್ಣ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಪತಿ ರವಿಚಂದ್ರನ್ ಅವರ ರುಂಡವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿಕೊಂಡು ಆಟೋದಲ್ಲಿ ಪೊಲೀಸ್ ಠಾಣೆಗೆ ಬಂದು ವಸುಂಧರಾ ಶರಣಾಗಿದ್ದಾರೆ.

ಉದ್ಯಮಿ ಪತಿ ರವಿಚಂದ್ರನ್ (53) ಕೊಂದ ಪತ್ನಿ ವಸುಂಧರಾ ರುಂಡವನ್ನು ಕಡಿದು ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾರೆ.

ರವಿಚಂದ್ರನ್ ಮತ್ತು ವಸುಂಧರಾ 25 ವರ್ಷಗಳ ಹಿಂದೆ ವಿವಾಹವಾಗಿದ್ದು, 20 ವರ್ಷದ ಮಗನ ಜೊತೆ ರಾಣಿಗುಂಟದಲ್ಲಿ ವಾಸಿಸುತ್ತಿದ್ದಾರೆ. ಕುಟುಂಬ ಹಲವಾರು ವರ್ಷಗಳಿಂದ ಇದ್ದು, ಇತ್ತೀಚೆಗೆ ರವಿಚಂದ್ರನ್ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ವಸುಂದರ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆಗಿದ್ದು, ವಸುಂಧರಾ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಂದಿದ್ದಾರೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು