ನವದೆಹಲಿ: ಅಸ್ಸಾಂ-ಮೇಘಾಲಯ ಕೇಡರ್ ನ ೨೦೧೧ ನೇ ಬ್ಯಾಚ್ ನ ಐ.ಪಿ.ಎಸ್ ಅಧಿಕಾರಿ ಆನಂದ್ ಮಿಶ್ರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮೂಲತಃ ಬಿಹಾರದವರಾದ ಇವರು ಪ್ರಸ್ತುತ ಅಸ್ಸಾಂನ ಲಖೀಂಪುರ್ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಮಣಿಪುರ ಹಿಂಸಾಚಾರದ ತನಿಖಾ ತಂಡದ ಭಾಗವಾಗಿ ಇವರನ್ನು ಮಣಿಪುರಕ್ಕೆ ಕಳುಹಿಸಲಾಗಿತ್ತು.
ತಮ್ಮ ಪ್ರಾಮಾಣಿಕ ಹಾಗು ಗಂಭೀರ ನಡತೆಯಿಂದ ಅಸ್ಸಾಂ ಸಿಂಗಂ ಎಂದು ಖ್ಯಾತರಾಗಿದ್ದ ಮಿಶ್ರಾ ಸಾಮಾಜಿಕ ಜಾಲತಾಣಗಳಲ್ಲಿಯೂ ಅನೇಕ ಹಿಂಬಾಲಕರನ್ನು ಹೊಂದಿದ್ದಾರೆ. ಇದೀಗ ಇವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಪತ್ರದಲ್ಲಿ ʼಸ್ವಾತಂತ್ರ್ಯʼ ಮತ್ತು ʼಸ್ವತಂತ್ರ ಜೀವನʼಕ್ಕಾಗಿ ಈ ನಿರ್ಧಾರವೆಂದು ತಿಳಿಸಿದ್ದಾರೆ.
ಸ್ವಾತಂತ್ರ್ಯದ ಜೀವನಕ್ಕಾಗಿ IPS ಹುದ್ದೆಗೆ ರಾಜೀನಾಮೆ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.