ನವದೆಹಲಿ: ದೇಶಾದ್ಯಂತ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಆರೋಪದ ಮೇಲೆ ಏಳು ಶಂಕಿತ ಐಸಿಸ್ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಚಾರ್ಜ್ ಶೀಟ್ ಸಲ್ಲಿಸಿದೆ. ಆರೋಪಿಗಳು ತಮ್ಮ ಹ್ಯಾಂಡ್ಲರ್ಗಳ ನಿರ್ದೇಶನದ ಮೇರೆಗೆ ಐಸಿಸ್ ಚಟುವಟಿಕೆ ನಡೆಸಲು ಹಣ ಸಂಗ್ರಹಿಸಿದ್ದಾರೆ. ಎಲ್ಲಾ ಆರೋಪಿಗಳು ವಿದ್ಯಾವಂತರು ಮತ್ತು ತಾಂತ್ರಿಕವಾಗಿ ಅತ್ಯುತ್ತಮ ಶಿಕ್ಷಣ ಪಡೆದಿದ್ದರು. ದೇಶದೆಲ್ಲೆಡೆ ದಾಳಿ ನಡೆಸುವ ಸಲುವಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಈ ಉಗ್ರರು ಹಲವಾರು ಸಭೆಗಳನ್ನು ನಡೆಸಿದ್ದರು. ಅಲ್ಲದೆ ವಾಟ್ಸಾಪ್ ಗುಂಪಿನ ಮೂಲಕ ಹೆಚ್ಚಿನ ಸದಸ್ಯರನ್ನು ನೇಮಕಕ್ಕೆ ಚಿಂತನೆ ನಡೆಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ಮುಂದುವರಿಸಲು ಅವರ ಕಾರ್ಯತಂತ್ರವನ್ನು ವಿವರಿಸುವ “ಕಾಫಿರ್ಗಳ ಮೇಲೆ ಪ್ರತೀಕಾರ” ಎಂಬ ಶೀರ್ಷಿಕೆಯ ದಾಖಲೆಗಳ ಸೆಟ್ ಅನ್ನು ಸಹ
ಎನ್ಐಎವಶಪಡಿಸಿಕೊಂಡಿದೆ. ಕಾಫಿರರು ಮೇಲೆ ಉಗ್ರರು ಸೇಡು ತೀರಿಸಿಕೊಳ್ಳಲು ಬಯಸಿದ್ದರು ಎಂದು ಎನ್ಐಎ ಆರೋಪ ಪಟ್ಟಿಯಲ್ಲಿ ಹೇಳಿದೆ. ಆರೋಪಿಗಳು ಸ್ಫೋಟಗಳನ್ನು ನಡೆಸಲು ಮಹಾರಾಷ್ಟ್ರ, ಕರ್ನಾಟಕ, ಗೋವಾ, ತೆಲಂಗಾಣ ಮತ್ತು ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸ್ಥಳಗಳನ್ನು ಗುರುತಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.