ನವದೆಹಲಿ: ಪ್ರಧಾನಿ ಮೋದಿ ಅವರು ತಮ್ಮ 105ನೇ ಸಂಚಿಕೆಯ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹೊಯ್ಸಳ ದೇವಸ್ಥಾನಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಿರುವುದನ್ನು ಪ್ರಸ್ತಾಪಿಸಿ ಮೆಚ್ಚು ಸೂಚಿಸಿದ್ದಾರೆ.
ಕರ್ನಾಟಕದ ಹೆಮ್ಮೆಯ ರಾಜಮನೆತನ ಹೊಯ್ಸಳರು ಹಲವು ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ಸುಂದರ, ಅತಿಸುಂದರ. ಈ ಪೈಕಿ ಹಾಸನದ ಬೇಲೂರು ಮತ್ತು ಹಳೇಬೀಡಿನಲ್ಲಿರುವ ಚೆನ್ನಕೇಶವ ದೇವಸ್ಥಾನ, ಹೊಯ್ಸಲೇಶ್ವರ ದೇವಸ್ಥಾನ ಮತ್ತು ಕೇಶವ ದೇವಸ್ಥಾನಗಳನ್ನು ಯುನೆಸ್ಕೋ ಸಂಸ್ಥೆ ತನ್ನ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿತ್ತು.
ಹಾಗೆಯೇ, ರವೀಂದ್ರನಾಥ್ ಠಾಗೋರ್ ಅವರ ಶಾಂತಿನಿಕೇತನ್ ಅನ್ನೂ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿರುವುದನ್ನು ಪಿಎಂ ಪ್ರಸ್ತಾಪಿಸಿದ್ದಾರೆ.