News Karnataka Kannada
Saturday, April 27 2024
ದೇಶ

ಹಿಮಾಚಲ: ಸಿಎಂ ನಿವಾಸದ ಸಮೀಪದಲ್ಲೇ ಕಾಣಿಸಿಕೊಂಡ ಚಿರತೆ

Cheetha
Photo Credit :

ಹಿಮಾಚಲಪ್ರದೇಶ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಪ್ರತಿಷ್ಠಿತ ಪ್ರದೇಶವೊಂದರಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಬಳಿ ಚಿರತೆಯೊಂದು ಕಾಣಿಸಿಕೊಂಡಿದೆ. ಮುಖ್ಯಮಂತ್ರಿಗಳ ಗೃಹದ ಬಳಿ ಚಿರತೆಯನ್ನು ಕಂಡ ಮಹಿಳೆಯೊಬ್ಬರು ಅಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.ನಗರದ ಸಂಜೌಲಿ, ಕನ್ಲಾಂಗ್, ನವ್ಬಾಹರ್‌ ಮತ್ತು ಮಲ್ಯಾನಾ ಪ್ರದೇಶಗಳಲ್ಲಿ ಚಿರತೆ ಈ ಹಿಂದೆ ಕಾಣಿಸಿಕೊಂಡಿದೆ. ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹೆಣ್ಣು ಚಿರತೆಯೊಂದನ್ನು ಸೆರೆ ಹಿಡಿಯಲು ಸಫಲರಾಗಿದ್ದರು.

ಘಟನೆ ಬಳಿಕ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹಾಗೂ ನಗರಾಡಳಿತಗಳು ದೊಡ್ಡ ಬೆಕ್ಕನ್ನು ಹಿಡಿಯಲು ಜಾಲ ಹೆಣೆದಿವೆ.

ಮುಖ್ಯಮಂತ್ರಿಗಳ ನಿವಾಸವಿರುವ ಭಾರೀ ಭದ್ರತೆ ಇರುವ ಇಂಥ ಪ್ರದೇಶದಲ್ಲೇ ಚಿರತೆ ಕಂಡಿರುವುದು ಸ್ಥಳೀಯರಲ್ಲಿ ಗಾಬರಿ ಮೂಡಿಸಿದೆ.

ನಗರದಲ್ಲಿ ಸುಮಾರು 8 ಚಿರತೆಗಳು ಓಡಾಡುತ್ತಿರುವ ಕಾರಣ ನಗರವಾಸಿಗಳಲ್ಲಿ ಭಯ ಆವರಿಸಿದೆ. ಕೆಲವೊಂದು ಚಿರತೆಗಳು ಅರಣ್ಯ ಇಲಾಖೆಯ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿವೆ.

ನಗರದಲ್ಲಿ ಇಬ್ಬರು ಮಕ್ಕಳನ್ನು ಚಿರತೆಗಳು ಕೊಂದಿವೆ. ದೀಪಾವಳಿಯ ರಾತ್ರಿಯೊಂದರ ವೇಳೆ, ನಗರದ ಡೌ‌ನ್‌ಡೇಲ್ ಪ್ರದೇಶದಲ್ಲಿ ಆರು ವರ್ಷದ ಮಗುವೊಂದನ್ನು ಚಿರತೆ ಕೊಂದಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು