News Karnataka Kannada
Sunday, May 05 2024
ದೇಶ

ಹಿಂದೂ ದೇಗುಲ ರಕ್ಷಣೆಗೆ ನಿಂತ ಮುಸ್ಲಿಂ ಕುಟುಂಬಗಳು

New Project 2021 09 28t182131.660
Photo Credit :

ದೆಹಲಿ: ಹಿಂದೂ – ಮುಸ್ಲಿಂ ಸಮುದಾಯದ ನಡುವೆ ದ್ವೇಷ ಬಿತ್ತುತ್ತಿರುವವರ ನಡುವೆಯೆ, ದೆಹಲಿಯಲ್ಲಿ ನಡೆದ ಘಟನೆಯೊಂದು ಹಿಂದೂ- ಮುಸ್ಲಿಂ ಬಾಧವ್ಯಕ್ಕೆ ಉತ್ತಮ ನಿದರ್ಶನವಾಗಿದೆ.

ನೂರ್‌ ನಗರದಲ್ಲಿರುವ ಪುರಾತನ ಹಿಂದೂ ದೇವಾಲಯ ರಕ್ಷಣೆಗಾಗಿ ಜಮಿಯಾ ನಗರದ ಮುಸ್ಲಿಂ ಕುಟುಂಬಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿವೆ. ದೇವಾಲಯದ ಉಸ್ತುವಾರಿ ಭೂಮಿಗಾಗಿ ಈಗಾಗಲೇ ಧರ್ಮಶಾಲಾದ ಒಂದು ಭಾಗವನ್ನು ಹಾನಿಗಳಿಸಿದ್ದು ಈ ಬಗ್ಗೆ ಆತಂಕಗೊಂಡ ಮುಸ್ಲಿಂ ಕುಟುಂಬಗಳು ದೇವಸ್ಥಾನ ರಕ್ಷಿಸುವಂತೆ ಕೋರ್ಟ್ ಮೆಟ್ಟಿಲೇರಿವೆ.

ಜಾಮಿಯಾ ನಗರ ವಾರ್ಡ್ ಸಂಖ್ಯೆ 206 ಸಮಿತಿಯ ಅಧ್ಯಕ್ಷ ಸೈಯದ್ ಫೌಜುಲ್ ಅಜೀಂ (ಆರ್ಶಿ) ಅವರು ಈ ಪ್ರದೇಶದ ಏಕೈಕ ದೇವಾಲಯದ ಅತಿಕ್ರಮಣ ಮತ್ತು ಧ್ವಂಸದ ಕುರಿತು ಕಳೆದ ವಾರ ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ.

ಬಿಲ್ಡರ್‌ಗಳು ಕಟ್ಟಡವನ್ನು ನಿರ್ಮಿಸಲು ಮತ್ತು ಫ್ಲಾಟ್‌ಗಳನ್ನು ಮಾರಾಟ ಮಾಡಲು ರಾತ್ರೋರಾತ್ರಿ ಧರ್ಮಶಾಲಾದ ಒಂದು ಭಾಗವನ್ನು ನೆಲಸಮಗೊಳಿಸಲು ಕೆಡವಲಾಯಿತು ಎಂದು ಅವರು ಆರೋಪಿಸಿದ್ದಾರೆ.

ನಗರಾಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿನ್ಯಾಸ ಯೋಜನೆ ದೇವಾಲಯದ ಆವರಣವನ್ನು ಸ್ಪಷ್ಟವಾಗಿ ಗುರುತಿಸಿದೆ. ಧರ್ಮಶಾಲಾ ಭೂಮಿ 1970 ರಲ್ಲಿ ದೇವಸ್ಥಾನವನ್ನು ನಿರ್ಮಿಸಿದ ಮಖನ್ ಲಾಲ್ ಅವರ ಮಗ ಜೋಹ್ರಿ ಲಾಲ್ ಗೆ ಸೇರಿದ್ದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು