News Karnataka Kannada
Thursday, May 09 2024
ದೇಶ

ಶೃಂಗಸಭೆ 2021: ಭಾರತದಲ್ಲಿ ಇಂದು ಪ್ರಮುಖ ಸಮ್ಮೇಳನ

New Project (7)
Photo Credit :

ಅಂತಾರಾಷ್ಟ್ರೀಯ ಹವಾಮಾನ ಶೃಂಗಸಭೆ-2021ರ ಅಂಗವಾಗಿ ಭಾರತವು ಇಂದು ಪ್ರಮುಖ ಸಮ್ಮೇಳನವೊಂದನ್ನು ಆಯೋಜಿಸಿದೆ. ಪ್ರಪಂಚದಾದ್ಯಂತದ ನೀತಿ ನಿರೂಪಕರು, ನಿಯಂತ್ರಕರು, ಉದ್ಯಮದ ನಾಯಕರು, ತಜ್ಞರು ಮತ್ತು ವಿಜ್ಞಾನಿಗಳು ಹವಾಮಾನ ಶೃಂಗಸಭೆಯ ಭಾಗವಾಗಲಿದ್ದಾರೆ.

ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ಜಿತೇಂದ್ರ ಸಿಂಗ್, ಎನ್‌ಐಟಿಐ ಆಯೋಗ್ ಸದಸ್ಯರಾದ ಡಾ.ವಿ.ಕೆ. ಸರಸ್ವತ್, ಸ್ಟರಲ್ ಹರಾಲ್ಡ್, ಪೆಡರ್‌ಸನ್, ಗ್ರೀನ್ ಸ್ಟಾಟ್ ಇಂಡಿಯಾದ ಅಧ್ಯಕ್ಷರು ನಾರ್ವೆಯ ಕೆಲವು ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಭೆಯ ಬಗ್ಗೆ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ನಿರ್ದೇಶಕರಾದ ಡಾ. ಆಶಿಶ್ ಕಿಶೋರ್ ಲೆಲೆ ಅವರು ಮಾತನಾಡಿದ್ದು, ಈ ಸಮ್ಮೇಳನವು ಭಾರತಕ್ಕೆ ಮಹತ್ವದ್ದಾಗಿದೆ.

ಪ್ರಪಂಚದ ಇತರೆ ಭಾಗವೂ ಗುರುತಿಸುವಂತಹ ಸಭೆ ಇದಾಗಲಿದೆ. ಹವಾಮಾನ ಬದಲಾವಣೆಯನ್ನು ತಗ್ಗಿಸುವ ತಂತ್ರಗಳ ಬಗ್ಗೆ ಮಾತನಾಡಲಾಗುವುದು. ಜೊತೆಗೆ ನಾವು ಅಳವಡಿಸಿಕೊಳ್ಳಬೇಕಾದ ಪರ್ಯಾಯ ತಂತ್ರಗಳ ಬಗ್ಗೆಯೂ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.

ಇಂಥದ್ದೇ ಒಂದು ಪರ್ಯಾಯ ವ್ಯವಸ್ಥೆ ಹೈಡ್ರೋಜನ್ ಪವರ್ ಬಳಕೆಯಾಗಿದೆ. ಆ.15 ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಿಸಿದ್ದರು. ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳಿಂದ ಸಿಗುವ ಎಲೆಕ್ಟ್ರೋಲೈಜರ್ ಬಳಸಿ ನೀರಿನ ಅಣುವನ್ನು ಹೈಡ್ರೋಜನ್ ಹಾಗೂ ಆಮ್ಲಜನಕ ಘಟಕಗಳಾಗಿ ವಿಭಜಿಸುವ ಮೂಲಕ ಹಸಿರು ಹೈಡ್ರೋಜನ್ ಉತ್ಪಾದಿಸಬಹುದು.

ಮುಂದಿನ ದಿನಗಳಲ್ಲಿ ಇದು ಭಾರೀ ಬದಲಾವಣೆ ತರುವ ನಿರೀಕ್ಷೆಯಿದೆ. ಪ್ರಸ್ತುತ ಶೇ.85 ರಷ್ಟು ತೈಲ ಮತ್ತು ಶೇ.53ರಷ್ಟು ಅನಿಲ ಬೇಡಿಕೆಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇಂಧನ ಅಗತ್ಯಕ್ಕಾಗಿ ವಾರ್ಷಿಕವಾಗಿ 14 ಟ್ರಿಲಿಯನ್ ಖರ್ಚು ಮಾಡಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು