ದೆಹಲಿ : ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ತಾರಕಕ್ಕೇರಿದೆ. ಕೃಷಿಕರ ಸಂಕಲ್ಪ ದೃಢವಾಗಿದ್ದು, ಇಷ್ಟುದಿನವೂ ಶಾಂತಿಯುತ ಸತ್ಯಾಗ್ರಹ ನಡೆಸಿದ್ದಾರೆ. ಆದರೆ ಅದು ಸರ್ಕಾರಕ್ಕೆ ಇಷ್ಟ ಆಗುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಶಾಂತಿಯುತ ಪ್ರತಿಭಟನೆ ಇಷ್ಟ ಆಗದ ಕಾರಣ, ಭಾರತ್ ಬಂದ್ ನಡೆಸಬೇಕಾಯ್ತು ಎಂದು ಹೇಳಿದ್ದಾರೆ. ಐ ಸ್ಟಾಂಡ್ ವಿತ್ ಫಾರ್ಮರ್ಸ್ ಎಂದಿರುವ ರಾಹುಲ್, ಎಲ್ಲರೂ ರೈತರಿಗೆ ಬೆಂಬಲ ನೀಡಿ ಎಂದಿದ್ದಾರೆ. ತಮ್ಮ ಪಕ್ಷದ ಮುಖ್ಯಸ್ಥರು, ಅಧ್ಯಕ್ಷರುಗಳಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ಈಗಾಗಲೇ 11 ಸುತ್ತಿನ ಮಾತುಕತೆ ನಡೆದಿದೆ. ಆದರೆ ಯಾವುದೂ ಉಪಯೋಗ ಆಗಿಲ್ಲ ಎಂದಿದ್ದಾರೆ.