ರಿಷಿಕೇಶ್ : ಇಂದು ಉತ್ತರಾಖಂಡಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ರಿಷಿಕೇಶದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಭಾರತದ ಕೋವಿಡ್ ವಿರುದ್ಧ ಹೋರಾಟದಲ್ಲಿ ಇಲ್ಲಿನ ಅಪಾರ ಜನಸಂಖ್ಯೆ ಮತ್ತು ವೈವಿಧ್ಯಮಯ ಸ್ಥಳಾಕೃತಿ ಪ್ರಮುಖ ಸವಾಲುಗಳಾಗಿವೆ. ಕಳೆದ ಕೆಲವು ದಿನಗಳಿಂದ, ಪಿಎಂ ಕೇರ್ಸ್ ಅನುಮೋದಿಸಿದ 1,150 ಕ್ಕಿಂತ ಹೆಚ್ಚು ಆಮ್ಲಜನಕ ಘಟಕಗಳು ಕಾರ್ಯನಿರ್ವಹಿಸಲು ಆರಂಭಿಸಿವೆ. ಈಗ ದೇಶದ ಪ್ರತಿಯೊಂದು ಜಿಲ್ಲೆಯು ಪಿಎಂ ಕೇರ್ಸ್ ಅಡಿಯಲ್ಲಿ ನಿರ್ಮಿಸಲಾಗಿರುವ ಆಮ್ಲಜನಕ ಘಟಕದಿಂದ ಆವೃತವಾಗಿದೆ ಎಂದು ಹೇಳಿದರು.
ಪಿಎಂ ಕೇರ್ಸ್ ಅಡಿಯಲ್ಲಿ ಸ್ಥಾಪಿಸಲಾದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 35 PSA ಆಕ್ಸಿಜನ್ ಪ್ಲಾಂಟ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಭಾಷಣ ಮಾಡಿದರು. ‘ರಾಷ್ಟ್ರವು ಈಗ 4,000 ಹೊಸ ಆಮ್ಲಜನಕ ಪ್ಲಾಂಟ್ ಗಳನ್ನು ಹೊಂದಿದೆ. ಇದು ವೈದ್ಯಕೀಯ ಆಮ್ಲಜನಕದ ಅಗತ್ಯವನ್ನು ಎದುರಿಸಲು ರಾಷ್ಟ್ರ ಮತ್ತು ಅದರ ಆಸ್ಪತ್ರೆಗಳಿಗೆ ಅಧಿಕಾರ ನೀಡಿದೆ. ಭಾರತವು ಮೊದಲು ಪ್ರತಿದಿನ 900 ಮೆಟ್ರಿಕ್ ಟನ್ ದ್ರವ ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ಬೇಡಿಕೆ ಹೆಚ್ಚಾದಾಗ, ರಾಷ್ಟ್ರವು ಅದನ್ನು ದಾಖಲೆ ಸಮಯದಲ್ಲಿ 10 ಪಟ್ಟು ಹೆಚ್ಚಿಸಿದೆ. ಸರ್ಕಾರವು ಈಗಾಗಲೇ 170 ಹೊಸ ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದ್ದು ಇದರೊಂದಿಗೆ ಆರೋಗ್ಯ ಶಿಕ್ಷಣದಲ್ಲಿ ಹೆಚ್ಚಿದ ಅವಕಾಶವು ದೇಶದಾದ್ಯಂತ ಆರೋಗ್ಯ ಸೇವೆಗಳ ಉತ್ತಮ ಲಭ್ಯತೆಗೆ ಗಮನಾರ್ಹ ಉತ್ತೇಜನ ನೀಡುತ್ತದೆ ಎಂದು ಹೇಳಿದರು.