ಪ್ರಧಾನಿ ನರೇಂದ್ರ ಮೋದಿ ನಾಳೆ ಉತ್ತರ ಪ್ರದೇಶದ ಬಲರಾಮ್ಪುರಕ್ಕೆ ಭೇಟಿ ನೀಡಲಿದ್ದು, ಸರಯೂ ನಾಲೆ ರಾಷ್ಟ್ರೀಯ ಯೋಜನೆಯನ್ನು ಮಧ್ಯಾಹ್ನ 1 ಗಂಟೆಗೆ ಉದ್ಘಾಟಿಸಲಿದ್ದಾರೆ.
ಸರಯೂ ನಾಲೆ ಯೋಜನೆಯ ಕೆಲಸವು 1978 ರಲ್ಲಿ ಪ್ರಾರಂಭವಾಯಿತು. ಆದರೆ ಬಜೆಟ್ ಬೆಂಬಲ, ಅಂತರ ಇಲಾಖೆಗಳ ಸಮನ್ವಯ ಮತ್ತು ಸಾಕಷ್ಟು ಮೇಲ್ವಿಚಾರಣೆಯ ನಿರಂತರತೆಯ ಕೊರತೆಯಿಂದಾಗಿ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಯಿತು. ನಾಲ್ಕು ದಶಕಗಳ ನಂತರವೂ ಪೂರ್ಣಗೊಂಡಿರಲಿಲ್ಲ.
ರೈತರ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ಪ್ರಧಾನ ಮಂತ್ರಿಯವರ ದೂರದೃಷ್ಟಿ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ದೀರ್ಘಾವಧಿಯ ಯೋಜನೆಗಳಿಗೆ ಆದ್ಯತೆ ನೀಡುವ ಅವರ ಬದ್ಧತೆ, ಯೋಜನೆಯ ಮೇಲೆ ಹೆಚ್ಚು ಗಮನವನ್ನು ತಂದಿತು.
ಇದರ ಪರಿಣಾಮವಾಗಿ 2016 ರಲ್ಲಿ, ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ತರಲಾಯಿತು. ಈ ಪ್ರಯತ್ನದಲ್ಲಿ, ಹೊಸ ಕಾಲುವೆಗಳನ್ನು ನಿರ್ಮಿಸಲು, ಯೋಜನೆಯಲ್ಲಿನ ನಿರ್ಣಾಯಕ ಅಂತರವನ್ನು ತುಂಬಲು ಮತ್ತು ಹಿಂದಿನ ಭೂಸ್ವಾಧೀನಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ವ್ಯಾಜ್ಯಗಳನ್ನು ಪರಿಹರಿಸಲು ಹೊಸ ಭೂಸ್ವಾಧೀನಕ್ಕೆ ನವೀನ ಪರಿಹಾರಗಳನ್ನು ಕಂಡುಹಿಡಿಯಲಾಯಿತು.
ಯೋಜನೆ ಮೇಲೆ ಹೊಸ ಗಮನ ಕೇಂದ್ರೀಕರಿಸಿದ ಪರಿಣಾಮವಾಗಿ ಕೇವಲ ನಾಲ್ಕು ವರ್ಷಗಳಲ್ಲಿ ಯೋಜನೆ ಪೂರ್ಣಗೊಂಡಿದೆ.