News Karnataka Kannada
Saturday, May 11 2024
ದೇಶ

ದೇವಸ್ಥಾನಕ್ಕೆ ನೀಡಿದ ಭೂಮಿಗೆ ಇನ್ನು ಮುಂದೆ ದೇವರೇ ಮಾಲೀಕ!

Supreem Mai Newsk 3834246588
Photo Credit :
ನವದೆಹಲಿ : ಅರ್ಚಕರನ್ನು ದೇವಸ್ಥಾನಕ್ಕೆ0ದು ನೀಡಿದ ಭೂಮಿಯ ಮಾಲಿಕನೆಂದು ಪರಿಗಣಿಸಲು ಆಗುವುದಿಲ್ಲ  ಎಂದು ಸುಪ್ರೀಂಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ದೇವಸ್ಥಾನದ ದೇವರೇ ಆಯಾ  ಭೂಮಿಗೆ ಮಾಲಿಕನಾಗಿರುತ್ತಾನೆ ಎಂದು ಸ್ಪಷ್ಟವಾಗಿ ಹೇಳಿದೆ. ಅರ್ಚಕರು ದೇವಸ್ಥಾನದ ಭೂಮಿಯನ್ನು ನಿರ್ವಹಣೆ ಮಾಡುವುದಕ್ಕಾಗಿ ಮಾತ್ರ ತಮ್ಮ ಸುಪರ್ದಿಯಲ್ಲಿ ಇರಿಸಿಕೊಳ್ಳಬಹುದು ಎಂದೂ ಅದು ತಿಳಿಸಿದೆ.
ದೇವಸ್ಥಾನದ ಭೂಮಿಗೆ ಸಂಬಂಧಿಸಿದಂತೆ ಕಂದಾಯ ದಾಖಲೆಗಳ ಮಾಲಿಕತ್ವದ ಕಾಲಂನಲ್ಲಿ ದೇವರ ಹೆಸರನ್ನೇ ಬರೆಯಬೇಕು ಎಂದು ಮಧ್ಯಪ್ರದೇಶದ ಪ್ರಕರಣವೊಂದರಲ್ಲಿ ಸೋಮವಾರ ಈ ಆದೇಶ ನೀಡಿರುವ ಸುಪ್ರೀಂಕೋರ್ಟ್‌ನ ನ್ಯಾ. ಹೇಮಂತ್‌ ಗುಪ್ತಾ ಮತ್ತು ಎ.ಎಸ್‌.ಬೋಪಣ್ಣ ಅವರ ಪೀಠ ಆದೇಶಿಸಿದೆ.
ಅರ್ಚಕರ ಹೆಸರನ್ನಾಗಲೀ, ಜಿಲ್ಲಾಧಿಕಾರಿಯ ಹೆಸರನ್ನಾಗಲೀ ಅಥವಾ ಯಾರು ಆ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾರೋ ಅವರ ಹೆಸರನ್ನಾಗಲೀ ಬರೆಯಬಾರದು. ಏಕೆಂದರೆ ಆ ಜಾಗದ ಕಾನೂನಾತ್ಮಕ ಮಾಲಿಕ ದೇವರೇ ಆಗಿರುತ್ತಾನೆ. ಭೂಮಿಯ ನಿರ್ವಹಣೆಯ ಜವಾಬ್ದಾರ ಕೂಡ ದೇವರೇ ಆಗಿದ್ದು, ಆತನ ಪರವಾಗಿ ಅದನ್ನು ಅರ್ಚಕರು, ಮ್ಯಾನೇಜರ್‌ಗಳು ಅಥವಾ ಇತರ ಸೇವಾಕರ್ತರು ನೋಡಿಕೊಳ್ಳುತ್ತಿರುತ್ತಾರೆ. ಹೀಗಾಗಿ ಮಾಲಿಕತ್ವದ ಕಾಲಂನಲ್ಲಿ ಅರ್ಚಕರು, ಮ್ಯಾನೇಜರ್‌ ಅಥವಾ ಸೇವಾಕರ್ತರ ಹೆಸರು ಬರೆಯುವ ಅಗತ್ಯವಿಲ್ಲ’ ಎಂದು ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು